ಮನೆ ರಾಜಕೀಯ ಸಿದ್ಧರಾಮೋತ್ಸವದಿಂದ ಡಿಕೆಶಿಗೆ ಭಯ: ನಳಿನ್ ಕುಮಾರ್ ಕಟೀಲ್  ವ್ಯಂಗ್ಯ

ಸಿದ್ಧರಾಮೋತ್ಸವದಿಂದ ಡಿಕೆಶಿಗೆ ಭಯ: ನಳಿನ್ ಕುಮಾರ್ ಕಟೀಲ್  ವ್ಯಂಗ್ಯ

0

ಬೆಂಗಳೂರು(Bengaluru): ಸಿದ್ಧರಾಮೋತ್ಸವದಿಂದ ಡಿ.ಕೆ.ಶಿವಕುಮಾರ್ ಗೆ ಭಯ ಶುರುವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ವ್ಯಂಗ್ಯವಾಡಿದ್ದಾರೆ.

ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ನಳೀನ್ ಕುಮಾರ್ ಕಟೀಲ್,  ಸಿದ್ಧರಾಮೋತ್ಸವದಿಂದ ನಮಗೆ ಹೊಟ್ಟೆ ಕಿಚ್ಚಿಲ್ಲ. ಸಿದ್ದರಾಮಯ್ಯ ಇನ್ನಷ್ಟು ಇಂತಹ ಕಾರ್ಯಕ್ರಮ ಮಾಡಲಿ. ಆದರೆ ಕಾರ್ಯಕ್ರಮ ಶುರುವಾದಾಗಿನಿಂದ ಡಿಕೆ ಶಿವಕುಮಾರ್ ಗೆ ನಿದ್ದೆ ಬರುತ್ತಿಲ್ಲ ಎಂದು ಹೇಳಿದ್ದಾರೆ.

ಮುಂದಿನ ಸಿಎಂ ಎಂದು ತೋರಿಸಿಕೊಳ್ಳಲು ಸಿದ್ಧರಾಮಯ್ಯ ತಮ್ಮ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದಾರೆ. ಸಿದ್ಧರಾಮಯ್ಯ ತನ್ನ ಜೊತೆಗಿದ್ದವರನ್ನು ಈಗಾಗಲೇ ಮುಗಿಸಿದ್ದಾರೆ. ಖರ್ಗೆ ಪರಮೇಶ್ವರ್ ದೂರವಿಟ್ಟಿದ್ದಾರೆ. ಈಗ ರಾಜಕೀಯವಾಗಿ ಡಿಕೆಶಿ ಮುಗಿಸಲು ತಂತ್ರ ಹೆಣೆದಿದ್ದಾರೆ ಎಂದು ಕುಟುಕಿದರು.

ಡ್ರಗ್ಸ್ ದಂಧೆಯಿಂದ ಕಾಂಗ್ರೆಸ್ ಸರ್ಕಾರ ಬದುಕಿತ್ತು. ಆದರೆ ಡ್ರಗ್ಸ್ ದಂಧೆಗೆ ಕಡಿವಾಣ ಹಾಕಿದ್ದು ಬಿಜೆಪಿ ಸರ್ಕಾರ. ಸಿದ್ಧರಾಮಯ್ಯ ಈಗ ಸಿಎಂ ರಾಜೀನಾಮೆ ಕೇಳುತ್ತಿದ್ದಾರೆ. ಅಂದು ಸಿದ್ಧರಾಮಯ್ಯನೇ ರಾಜೀನಾಮೆ ನೀಡಬೇಕಿತ್ತು ಎಂದು ಕಟೀಲ್ ಟೀಕಿಸಿದರು.