ಮನೆ ಸುದ್ದಿ ಜಾಲ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಎಲ್.ನಾಗೇಂದ್ರ ಚಾಲನೆ

ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಎಲ್.ನಾಗೇಂದ್ರ ಚಾಲನೆ

0

ಮೈಸೂರು (Mysuru): ಚಾಮರಾಜ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಾರ್ಡ್ ನಂ.2ರ ವ್ಯಾಪ್ತಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಎಲ್.ನಾಗೇಂದ್ರ ಭೂಮಿ ಪೂಜೆ ನೆರವೇರಿಸಿದರು.
ಅಭಿಷೇಕ್ ಸರ್ಕಲ್ ನಿಂದ ಮಂಚೇಗೌಡನ ಕೊಪ್ಪಲು ಅರಳಿಕಟ್ಟೆವರೆಗೆ ಚರಂಡಿ ನಿರ್ಮಾಣ ಕಾಮಗಾರಿ, ರೂ. 3 ಕೋಟಿ ವೆಚ್ಚದಲ್ಲಿ ಸಂಗಂ ಸರ್ಕಲ್ ನಿಂದ ಅರಳಿಕಟ್ಟೆವರೆಗೆ ರಸ್ತೆ ಚರಂಡಿ ಪಕ್ಕದ ಪಾದಚಾರಿ ಮಾರ್ಗ ನಿರ್ಮಾಣ ಕಾಮಗಾರಿ, ಅಭಿಷೇಕ್ ವೃತ್ತದ ಬಳಿ ರೂ. 11 ಲಕ್ಷ ವೆಚ್ಚದಲ್ಲಿ ಬಸ್ ನಿಲ್ದಾಣದ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದರು.
ಈ ಸಂದರ್ಭದಲ್ಲಿ ನಗರಪಾಲಿಕೆ ಸದಸ್ಯರಾದ ಶ್ರೀಮತಿ ಪ್ರೇಮ ಶಂಕರೇಗೌಡ, ಮಹಾನಗರ ಪಾಲಿಕೆ ಆಯುಕ್ತರಾದ ಶ್ರೀ ಲಕ್ಷ್ಮೀಕಾಂತ ರೆಡ್ಡಿ, ಉಪ ಆಯುಕ್ತರಾದ ಶ್ರೀ ಮಹೇಶ್, ಮಾಜಿ ಉಪಮೇಯರ್ ಮಹಾದೇವಪ್ಪ, ಚಾಮರಾಜ ಕ್ಷೇತ್ರದ ಪ್ರಧಾನಕಾರ್ಯದರ್ಶಿ ಶ್ರೀ ಪುನೀತ್, ಮಹಿಳಾ ಮೋರ್ಚಾ ಅಧ್ಯಕ್ಷರಾದ ಶ್ರೀಮತಿ ತನುಜಾ, ಗ್ರಾಮದ ಯಜಮಾನರುಗಳಾದ ಶ್ರೀ ದೊಡ್ಡಣ್ಣ, ಶ್ರೀ ಶಿವಣ್ಣ, ಶ್ರೀ ಶಿವರಾಮಣ್ಣ ಮತ್ತಿತರರು ಉಪಸ್ಥಿತರಿದ್ದರು.