ಮನೆ ರಾಜಕೀಯ ಶಿವಕುಮಾರೋತ್ಸವ ಆಚರಿಸುವಂತೆ ಡಿಕೆಶಿ ಬೆಂಬಲಿಗರ ಪತ್ರ

ಶಿವಕುಮಾರೋತ್ಸವ ಆಚರಿಸುವಂತೆ ಡಿಕೆಶಿ ಬೆಂಬಲಿಗರ ಪತ್ರ

0

ಬೆಂಗಳೂರು(Bengaluru): ವಿಪಕ್ಷ ನಾಯಕ ಸಿದ್ದರಾಮಯ್ಯಗೆ  75 ವರ್ಷ ತುಂಬಿದ ಹಿನ್ನೆಲೆಯಲ್ಲಿ ಸಿದ್ದರಾಮಯ್ಯರ 75ನೇ ಅಮೃತ ಮಹೋತ್ಸವವನ್ನು ಆಚರಿಸಲು ಅವರ ಬೆಂಬಲಿಗರು ಮುಂದಾಗಿರುವ ಹಿನ್ನೆಲೆಯಲ್ಲಿ ಶಿವಕುಮಾರೋತ್ಸವ ಆಚರಿಸುವಂತೆ ಬೆಂಬಲಿಗರೊಬ್ಬರು ಬಹಿರಂಗ ಪತ್ರ ಬರೆದಿದ್ದಾರೆ.

ಕೆಪಿಸಿಸಿ ಮಾಧ್ಯಮ‌ ವಿಭಾಗದ ಸಂಯೋಜಕ ಜಿ.ಸಿ.ರಾಜು ಪತ್ರ ಬರೆದಿದ್ದು, ಸಿದ್ದರಾಮಯ್ಯರ 75ನೇ ಅಮೃತ ಸಮಿತಿಯಿಂದ ಕಾರ್ಯಕ್ರಮ ನಡೆಯುತ್ತಿದ್ದು, ಅದೇ ಸಮಿತಿಯಿಂದ ಕಾರ್ಯಕ್ರಮ ಆಯೋಜಿಸಲು ಸಲಹೆ ನೀಡಿದ್ದಾರೆ. ಅಲ್ಲದೇ ಇಂದು ಸಮಿತಿ ಸಭೆಯಲ್ಲಿ ಈ ಬಗ್ಗೆ ಚರ್ಚಿಸುವಂತೆ ಮನವಿ ಮಾಡಿದ್ದಾರೆ.

ಡಿಕೆ ಶಿವಕುಮಾರ್  ಪಕ್ಷಕ್ಕಾಗಿ ದುಡಿದವರು. ಈ ಹಿನ್ನೆಲೆಯಲ್ಲಿ  ಸಭೆಯಲ್ಲಿ ಶಿವಕುಮಾರೋತ್ಸವ ಬಗ್ಗೆ ಚರ್ಚಿಸಿ ಎಂದು ಮನವಿ  ಮಾಡಿದ್ದಾರೆ.

ನನಗೆ ಕಾಂಗ್ರೆಸ್ ಉತ್ಸವ ಬೇಕು: ಡಿಕೆ ಶಿವಕುಮಾರ್

ಶಿವಕುಮಾರೋತ್ಸವ ಮಾಡುವಂತೆ ತಮ್ಮ ಬೆಂಬಲಿಗನ ಬಹಿರಂಗ ಪತ್ರಕ್ಕೆ ಪ್ರತಿಕ್ರಿಯಿಸಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ಅಭಿಮಾನಿಗಳು ಏನು ಹೇಳ್ತಾರೋ ಅದು ಅವರಿಗೆ ಬಿಟ್ಟಿದ್ದು.  ನನಗೆ ಕಾಂಗ್ರೆಸ್ ಉತ್ಸವ ಬೇಕು ಬೇರೆ ಉತ್ಸವ ಬೇಡ.  ನನ್ನ ಪೂಜೆ ಯಾರೂ ಮಾಡಬೇಡಿ. ಪಕ್ಷದ ಪೂಜೆ ಮಾಡಿ.  ನನಗೆ ಯಾವ ಉತ್ಸವವೂ ಬೇಡ. ಕಾಂಗ್ರೆಸ್ ಉತ್ಸವ ಮಾಡಲಿ ಎಂದಿದ್ದಾರೆ.