ಮನೆ ರಾಜ್ಯ ದನದ ಕೊಟ್ಟಿಗೆಗೆ ಆಕಸ್ಮಿಕ ಬೆಂಕಿ: ಮೂರು ಹಸುಗಳ ಸಜೀವ ದಹನ

ದನದ ಕೊಟ್ಟಿಗೆಗೆ ಆಕಸ್ಮಿಕ ಬೆಂಕಿ: ಮೂರು ಹಸುಗಳ ಸಜೀವ ದಹನ

0

ಮೈಸೂರು(Mysuru): ಹುಲ್ಲಿನಿಂದ ನಿರ್ಮಿಸಿದ್ದ ಕೊಟ್ಟಿಗೆಗೆ ಆಕಸ್ಮಿಕ ಬೆಂಕಿ ತಗುಲಿ ಮೂರು ಹಸುಗಳು ಸಜೀವ ದಹನವಾಗಿರುವ ಘಟನೆ ಗಾವಡಗೆರೆ ಹೋಬಳಿಯ ಮುಳ್ಳೂರು ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಜಯಮ್ಮ ಎಂಬುವರು ರಾತ್ರಿ 10ಗಂಟೆ ಸುಮಾರಿಗೆ ಸೊಳ್ಳೆಯನ್ನು ಓಡಿಸಲು ಕಟ್ಟಿಗೆಯೊಂದಕ್ಕೆ ಬೆಂಕಿ ಹಚ್ಚಿದ್ದರು. ಈ ವೇಳೆ, ಬೆಂಕಿ ಕಿಡಿ ಹಾರಿ ಆಕಸ್ಮಿಕವಾಗಿ ದನದ ಕೊಟ್ಟಿಗೆಗೆ ತಗುಲಿದೆ. ಇದರಿಂದ ಕೊಟ್ಟಿಗೆ ಹೊತ್ತಿ ಉರಿದಿದ್ದು ಮೂರು ಹಸುಗಳು ಸಜೀವ ದಹನವಾಗಿವೆ.

ಈ ಕುರಿತು ಬಿಳಿಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.