ಮನೆ ರಾಜಕೀಯ ಚಿಕ್ಕಮಗಳೂರು ಉಸ್ತುವಾರಿ ಬೈರತಿ ಬಸವರಾಜ್ ಹೆಗಲಿಗೆ

ಚಿಕ್ಕಮಗಳೂರು ಉಸ್ತುವಾರಿ ಬೈರತಿ ಬಸವರಾಜ್ ಹೆಗಲಿಗೆ

0

ಬೆಂಗಳೂರು(Bengaluru): ಭಾರಿ ಮಳೆಯಿಂದ ತತ್ತರಿಸುತ್ತಿರುವ ಚಿಕ್ಕಮಗಳೂರು ಜಿಲ್ಲೆಉಸ್ತುವಾರಿ ಸಚಿವರನ್ನಾಗಿ ಭೈರತಿ ಬಸವರಾಜು ಅವರನ್ನು ನೇಮಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ

ನಗರಾಭಿವೃದ್ಧಿ ಖಾತೆ ಸಚಿವರಾಗಿರುವ ಬೈರತಿ ಬಸವರಾಜ ಅವರಿಗೆ ದಾವಣಗೆರೆ ಜತೆಗೆ ಹೆಚ್ಚುವರಿಯಾಗಿ ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿ ಹೊಣೆ ನೀಡಲಾಗಿದೆ. 

ಸಚಿವ ಸಂಪುಟದಲ್ಲಿ ಪ್ರಾತಿನಿಧ್ಯವಿಲ್ಲದ ಜಿಲ್ಲೆಗಳಿಗೆ ಬೇರೆ ಜಿಲ್ಲೆಗಳ ಸಚಿವರು ನೇಮಕವಾಗಿದ್ದು, ಕೆಲವು ಸಚಿವರಿಗೆ ಹೆಚ್ಚುವರಿ ಜವಾಬ್ದಾರಿ ನೀಡಲಾಗಿದೆ. ಹೆಚ್ಚುವರಿ ಉಸ್ತುವಾರಿ ಹೊಣೆ‌ ಹೊತ್ತ ಬೆನ್ನಲ್ಲೇ ಬೈರತಿ ಬಸವರಾಜ ಅವರು ಚಿಕ್ಕಮಗಳೂರು ಜಿಲ್ಲೆಯ ಅತಿವೃಷ್ಟಿ ಬಾಧಿತ ಪ್ರದೇಶಕ್ಕೆ ಶನಿವಾರ ಭೇಟಿ ನೀಡಿ, ಹಾನಿ ಪರಿಶೀಲಿಸಿದ್ದಾರೆ.