ಮನೆ ದೇವಸ್ಥಾನ ಮಲೆಮಹದೇಶ್ವರ ಬೆಟ್ಟ: ಪೂಜೆ ಮಾಡುವಾಗ ಕುಸಿದು ಬಿದ್ದು ಅರ್ಚಕ ಸಾವು

ಮಲೆಮಹದೇಶ್ವರ ಬೆಟ್ಟ: ಪೂಜೆ ಮಾಡುವಾಗ ಕುಸಿದು ಬಿದ್ದು ಅರ್ಚಕ ಸಾವು

0

ಚಾಮರಾಜನಗರ(Chamarajanagara): ಹನೂರು ತಾಲೂಕಿನ ಪ್ರಸಿದ್ಧ ತೀರ್ಥಕ್ಷೇತ್ರ ಮಲೆಮಹದೇಶ್ವರ ಬೆಟ್ಟದಲ್ಲಿ ಅರ್ಚಕರೊಬ್ಬರು ಕುಸಿದು ಬಿದ್ದು ಮೃತಪಟ್ಟಿದ್ದಾರೆ.

ನಾಗಣ್ಣ (40) ಮೃತಪಟ್ಟ ಅರ್ಚಕರು.

ಒಂದೂವರೆ ವರ್ಷದ ಬಳಿಕ ಇವರಿಗೆ ಮಾದಪ್ಪನಿಗೆ ಪೂಜೆ ಸಲ್ಲಿಸುವ ಸರದಿ ಬಂದಿತ್ತು. ಇಂದು ಬೆಳಗ್ಗೆ 4 ಗಂಟೆಗೆ ತೆರಳಿ ಪೂಜೆ ಮಾಡುವಾಗ ಹಠಾತ್ತಾಗಿ ಕುಸಿದು ಬಿದ್ದಿದ್ದಾರೆ. ಬಳಿಕ ಆಂಬ್ಯುಲೆನ್ಸ್‌ನಲ್ಲಿ ಹನೂರು ಸರ್ಕಾರಿ ಆಸ್ಪತ್ರೆಗೆ ಕರೆತರುವಾಗ ಮಾರ್ಗಮಧ್ಯೆ ಅಸುನೀಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.