ಮನೆ ರಾಜ್ಯ ಚಾಮುಂಡಿ ಬೆಟ್ಟದಲ್ಲಿ 70 ಸಾವಿರ ಜನರಿಗೆ ದಾಸೋಹ

ಚಾಮುಂಡಿ ಬೆಟ್ಟದಲ್ಲಿ 70 ಸಾವಿರ ಜನರಿಗೆ ದಾಸೋಹ

0

ಮೈಸೂರು(Mysuru): ಆಷಾಢ ಮಾಸದ ಕೊನೆಯ ಶುಕ್ರವಾರ ಹಿನ್ನೆಲೆಯಲ್ಲಿಂದು ಚಾಮುಂಡಿ ಬೆಟ್ಟದಲ್ಲಿ ಸುಮಾರು 70 ಸಾವಿರ ಜನರಿಗೆ ಆಗುವಷ್ಟು ದಾಸೋಹ ಏರ್ಪಡಿಸಲಾಗಿದೆ.

ಜಿಲ್ಲಾ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಅವರ ಮಾರ್ಗದರ್ಶನದಲ್ಲಿ ಯಶವಂತಪುರ ಕ್ಷೇತ್ರದ ನಿವಾಸಿ ಮಹೇಶ್ ಅವರ ಜಿ.ಕೆ. ಫೌಂಡೇಷನ್ ವತಿಯಿಂದ ದಾಸೋಹ ಏರ್ಪಡಿಸಲಾಗಿತ್ತು.

ಬಾಳೆ ಎಲೆಯಲ್ಲಿ ಊಟ ಮಾಡಲು ಸುಮಾರು 40 ಸಾವಿರ ಜನರಿಗೆ, ಬಫೆಯಲ್ಲಿ ಸುಮಾರು 30 ಸಾವಿರ ಜನರಿಗೆ ಆಗುವಷ್ಟು ವ್ಯವಸ್ಥೆ ಮಾಡಿದ್ದೇವೆ. ರಾತ್ರಿವರೆಗೂ ಅನ್ನದಾಸೋಹ ನಡೆಯಲಿದೆ ಎಂದು ತಿಳಿಸಿದ್ದಾರೆ.

ಕಾರ್ಯಕ್ರಮಕ್ಕೆ ಕಾಗಿನೆಲೆ ಜಗದ್ಗುರು ಶ್ರೀ ನಿರಂಜನಾನಂದಪುರಿ ಸ್ವಾಮೀಜಿ, ಶಾಸಕ ಎಲ್. ನಾಗೇಂದ್ರ, ಮುಡಾ ಮಾಜಿ ಅಧ್ಯಕ್ಷ ಹೆಚ್.ವಿ.ರಾಜೀವ್, ಇನ್ನೂ ಅನೇಕ ಗಣ್ಯರು ಬಂದು ಶುಭ ಹಾರೈಸಿದ್ದಾರೆ.