ಮನೆ ರಾಜ್ಯ ಮಡಿಕೇರಿ: ಮನೆಯ ಕಿಟಕಿ ಸರಳು ಮುರಿದು ಆಹಾರ ಪದಾರ್ಥ ಸೇವಿಸಲು ಯತ್ನಿಸಿದ ಕಾಡಾನೆ

ಮಡಿಕೇರಿ: ಮನೆಯ ಕಿಟಕಿ ಸರಳು ಮುರಿದು ಆಹಾರ ಪದಾರ್ಥ ಸೇವಿಸಲು ಯತ್ನಿಸಿದ ಕಾಡಾನೆ

0

ಮಡಿಕೇರಿ(Madikeri):  ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ ಗಣಗೂರಿನಲ್ಲಿ ಕಾಡಾನೆಯು ಮನೆಯ ಕಿಟಕಿ ಸರಳುಗಳನ್ನು ಮುರಿದು ಆಹಾರ ಪದಾರ್ಥಗಳನ್ನು ಸೇವಿಸಲು ಯತ್ನಿಸಿದೆ.

ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ ಗಣಗೂರಿನ ಪಾರ್ವತಿ ಶೇಖರ್ ಅವರ ಮನೆಯ ಕಿಟಕಿ ಸರಳುಗಳನ್ನು ಮುರಿದು ಕಾಡಾನೆ ಅಕ್ಕಿ ಸೇರಿದಂತೆ ಆಹಾರ ಪದಾರ್ಥಗಳನ್ನು ತಿನ್ನಲು ಪ್ರಯತ್ನಿಸಿತ್ತು. ಈವೇಳೆ ಮನೆಯಲ್ಲಿದ್ದವರು ಕಿರುಚಿದ್ದರಿಂದ ಆನೆ ಅಲ್ಲಿಂದ ಹೊರಟಿದ್ದು ಹಾಗೂ ಹೋಗುವ ಸಮಯದಲ್ಲಿ ಆನೆಯು ಅವರ ಮನೆಯ ಗೋಡೆ, ಕಿಟಕಿ, ಕೊಳವೆಬಾವಿ ಪೈಪ್, ಅಡಿಕೆ, ತೆಂಗು ಕಾಫಿ ಗಿಡಗಳನ್ನು ನಾಶಪಡಿಸಿದೆ.

ಅದೇ ಗ್ರಾಮದ ಎಂ ಎನ್ ಚಂದ್ರಪ್ಪ ಹಾಗೂ ಕುದುಪಜೆ ನಾಗೇಶ್ ಅವರ ಜಮೀನಿಗೂ ಕಾಲಿಟ್ಟ ಕಾಡಾನೆಗಳು ಶುಂಠಿ, ತೆಂಗು ಅಡಕೆ, ಬಾಳೆ, ಕಾಫಿ, ಸೇರಿದಂತೆ ರೈತರು ಬೆಳೆದ ಬೆಳೆಗಳನ್ನು ಕೂಡ ನಾಶಪಡಿಸಿದೆ.