ಮನೆ ಜ್ಯೋತಿಷ್ಯ ಇಂದಿನ ರಾಶಿ ಭವಿಷ್ಯ

ಇಂದಿನ ರಾಶಿ ಭವಿಷ್ಯ

0

ದಿನ ಪ್ರಾರಂಭಿಸುವ ಮುನ್ನ ನಿಮ್ಮ ರಾಶಿಯನ್ನು ನೋಡಿಕೊಂಡು ಅದರಲ್ಲಿ ನೀಡಲಾಗಿರುವ ಸೂಚನೆಗಳನ್ನು ಪಾಲಿಸಿ. ಇಲ್ಲಿದೆ ಇಂದಿನ ರಾಶಿ ಭವಿಷ್ಯ.

ಮೇಷ ರಾಶಿ

ನಿಮ್ಮ ರಾಶಿಗೆ ಈ ದಿನ ಶುಭ ದಿನ. ತಾಯಿ ಆರೋಗ್ಯದಲ್ಲಿ ಚೇತರಿಕೆ. ತಾಯಿಯ ಮನಸ್ಸಿಗೆ ಸಂತೋಷ ಇದೆ. ಮನೆಯಲ್ಲಿ ಆಸ್ತಿ ಖರೀದಿ, ಅಥವಾ ಮದುವೆ ಮಾತುಕತೆ ನಡೆಯುತ್ತದೆ. ಮನಸ್ಸಿಗೆ ಉಲ್ಲಾಸ ಕೊಡುವ ದಿನ. ನೌಕರಿಯಲ್ಲಿ ಶುಭ ಸುದ್ದಿ ಇದೆ. ನಿಮ್ಮ ಕೆಲಸಕ್ಕೆ ಪ್ರಶಂಸೆ ಸಿಗುತ್ತದೆ.

ವೃಷಭ ರಾಶಿ

ಸಹೋದರ ವರ್ಗದಿಂದ ಸಹಾಯ ಮನಸ್ಸಿಗೆ ಸಂತಸ ಇದೆ. ಕುಟುಂಬದಲ್ಲಿ ಆಹ್ಲಾದಕರ ವಾತಾವರಣ ಇರುತ್ತದೆ. ನೌಕರಿಯಲ್ಲಿ ಕೊಂಚ ಒತ್ತಡದ ದಿನ. ತಂದೆಯಿಂದ ಸಹಾಯ ಹಸ್ತ. ಸರ್ಕಾರಿ ನೌಕರಿರಗೆ ಹಾಗೂ ರಾಜಕೀಯ ವ್ಯಕ್ತಿಗಳಿಗೆ ಶುಭದಿನ.

ಮಿಥುನ ರಾಶಿ

ತಾಯಿಯಿಂದ ಧನಸಹಾಯ ಇದೆ. ಆರೋಗ್ಯದಲ್ಲಿ ಕೊಂಚ ಏರುಪೇರು. ನೌಕರಿಯಲ್ಲಿ ಸ್ಥಾನ ಬದಲಾವಣೆ ಇದೆ. ಮನಸ್ಸಿಗೆ ಯಾವುದೋ ಒಂದು ಚಿಂತೆ ಕಾಡಿಸುತ್ತಿರುತ್ತದೆ. ಯಾವುದೇ ಸಮಸ್ಯೆಯನ್ನು ಧೈರ್ಯದಿಂದ ಎದುರಿಸುವ ಮನೋಬಲ ನಿಮಗೆ ಇದೆ.

ಕರ್ಕಾಟಕ ರಾಶಿ

ನಿಮ್ಮ ರಾಶಿಯಲ್ಲೇ ಚಂದ್ರ-ಸೂರ್ಯ-ಬುಧ ಇದ್ದಾರೆ. ಇದು ಮನೋಬಲವನ್ನು ಹೆಚ್ಚಿಸುತ್ತದೆ. ಕೊಂಚ ಶೀತಬಾಧೆ ಕಾಡಿಸಬಹುದು. ಮನಸ್ಸಿಗೆ ಆಹ್ಲಾದ ನೀಡುವ ಸ್ಥಳಗಳಿಗೆ ಭೇಟಿ ಕೊಡುತ್ತೀರಿ. ತಾಯಿಯ ಮನಸ್ಸಿಗೆ ವ್ಯಥೆ ಇದೆ. ತಂದೆಯ ಆರೋಗ್ಯದಲ್ಲಿ ಕೊಂಚ ಏರುಪೇರು. ಯಾವುದೋ ಮೂಲದಿಂದ ಹಣ ಬರುವ ಸಾಧ್ಯತೆ ಇದೆ.

ಸಿಂಹ ರಾಶಿ

ಈ ದಿನ ನಷ್ಟವೇ ಹೆಚ್ಚು. ಹಣ ಕೈಬಿಟ್ಟು ಹೋಗದಂತೆ ಎಚ್ಚರಿಕೆ ವಹಿಸಿ. ರಾಜಕೀಯ ರಂಗದವರಿಗೂ ಹಿನ್ನಡೆ ಇದೆ. ಯಾವುದೇ ಮುಖ್ಯ ನಿರ್ಧಾರಗಳನ್ನು ಮುಂದೂಡಿ. ಮಾತಿನಿಂದ ವಿವಾದಕ್ಕೆ ಸಿಕ್ಕಿಕೊಳ್ಳಬೇಡಿ. ದೈವ ಕಾರ್ಯಕ್ಕೆ ಧನ ವ್ಯಯವಾಗುತ್ತದೆ. ಚೂಪಾದ ಆಯುಧಗಳು ಹಾಗೂ ಬೆಂಕಿಯಿಂದ ದೂರವಿರಿ. ಅಪಾಯ ಇದೆ. ನರಸಿಂಹನ ಸ್ತೋತ್ರ ಮಾಡಿ.

ಕನ್ಯಾ ರಾಶಿ

ಸರ್ಕಾರಿ ಕೆಲಸದಲ್ಲಿ ಇರುವವರಿಗೆ ವೈದ್ಯರಿಗೆ ಸರ್ಜನ್ ಗಳಿಗೆ ಶುಭದಿನ. ಸರ್ಕಾರದಿಂದ ನಿಮಗೆ ಸಹಾಯ ಹಸ್ತವೂ ಇದೆ. ಯವುದೋ ಸರ್ಕಾರಿ ಪ್ರಾಜಕ್ಟ್ ನಿಮ್ಮ ಕೈಸೇರಿ ಲಾಭ ತಂದುಕೊಡುತ್ತದೆ. ಮಾತಿನಿಂದ ನಷ್ಟ. ಮಾತನ್ನು ಎಚ್ಚರಿಕೆಯಿಂದ ಆಡಿ. ವಿವಾದಕ್ಕೆ ಸಿಲುಕಬೇಡಿ.

ತುಲಾ ರಾಶಿ

ರಾಜಕೀಯ ರಂಗದಲ್ಲಿ ಇರುವವರಿಗೆ ಉತ್ತಮ ದಿನ. ಆಭರಣ ವಸ್ತ್ರ ವ್ಯಾಪಾರಿಗಳಿಗೂ ಶುಭದಿನ. ಹಾಲು ಹಾಲಿನ ಉತ್ಪನ್ನಗಳ ವ್ಯಾಪಾರಿಗಳಿಗೂ ಈದಿನ ಶುಭ ದಿನ. ಆರೋಗ್ಯ ಜಾಗ್ರತೆ. ಸ್ವಲ್ಪ ದಿನಗಳ ಕಾಲ ಯಾರಿಗೂ ಸಾಲ ಕೊಡಬೇಡಿ. ವಸೂಲಾಗಲು ಕಷ್ಟ. ಷೇರುಗಳಲ್ಲಿ ಹಣ ಹಾಕಬೇಡಿ.

ವೃಶ್ಚಿಕ ರಾಶಿ

ನಿಮಗೆ ಶುಭಫಲಗಳು ಹೆಚ್ಚು. ಭಾಗ್ಯೋದಯವಾಗುವಂಥ ಸಮಯ. ನೌಕರಿಯಲ್ಲಿ ಪ್ರಶಂಸೆ ಕೇಳುತ್ತೀರಿ. ನಿಮಗೆ ಪ್ರಿಯವಾದ ನೀವು ಕಾತುರದಿಂದ ನಿರೀಕ್ಷಿಸುತ್ತಿದ್ದ ವಾರ್ತೆಯೊಂದು ನಿಮ್ಮ ಕಿವಿಗೆ ಬೀಳಲಿದೆ. ವಿದ್ಯಾರ್ಥಿಗಳಿಗೆ ಉತ್ತಮ ದಿನ ಪರೀಕ್ಷಾ ಫಲಿತಾಂಶ ಎದುರುನೋಡುತ್ತಿರುವವರಿಗೂ ಶುಭದಿನ.

ಧನಸ್ಸು ರಾಶಿ

ನಿಮ್ಮ ನಡೆಯನ್ನು ಅತ್ಯಂತ ಜಾಗರೂಕತೆಯಿಂದ ಇಡಿ. ನಿಮ್ಮ ನಡವಳಿಕೆ ಅನೇಕರಿಗೆ ಪ್ರಶ್ನಾರ್ಥಕ ಭಾವ ಮೂಡಿಸುತ್ತದೆ. ತಿಳಿದೂ ತಿಳಿದೂ ಬೆಂಕಿಗೆ ಕೈಯೊಡ್ಡುವ ಸಾಹಸ ಮಾಡುತ್ತಿದ್ದೀರಿ. ನೀವು ಮಾಡುವ ಕೆಲಸ ನಿಮ್ಮ ಗೌರವ ಘನತೆಗೆ ತಕ್ಕುದ್ದೇ ಎಂದು ಯೋಚಿಸಿ ಮುಂದೆ ಹೆಜ್ಜೆ ಇಡಿ. ಈಶ್ವರನನ್ನು ಧ್ಯಾನ ಮಾಡಿ.

ಮಕರ ರಾಶಿ

ಹೊಸ ನೌಕರಿಗಾಗಿ ಹುಡುಕುತ್ತಿದ್ದೀರಿ. ಹೊಸ ನೌಕರಿಗಾಗಿ ನೀವು ಇನ್ನೂ ಕಾಯಬೇಕು. ಆದರೆ ಹುಡುಕುವ ಕೆಲಸ ನಡೆಯಲಿ. ಈಗಿರುವ ಕೆಲಸ ಒತ್ತಡವಿದ್ದರೂ ಬಿಡಬೇಡಿ. ಧೈರ್ಯವಾಗಿರಿ. ಗುರುಗಳ ಪ್ರಾರ್ಥನೆ ಮಾಡಿ. ತಂದೆ ತಾಯಿ ಯಿಂದ ಸಹಾಯ ಇದೆ. ನಿಮ್ಮ ಸಂಗಾತಿ ಸ್ಥಾನಾಧಿಪತಿಯೂ ಸ್ವಂತ ಮನೆಯಲ್ಲೇ ಇರುವುದರಿಂದ ಸಂಗಾತಿಯಿಂದಲೂ ಬೆಂಬಲ ಸಿಗುತ್ತದೆ.

ಕುಂಭ ರಾಶಿ

ಹಿಡಿದ ಕೆಲಸ ಸಾಧಿಸುತ್ತೀರಿ. ಮನಸ್ಸಿಗೆ ಸಂತೋಷ ನೀಡುವಂಥ ಘಟನೆಗಳು ನಡೆಯುತ್ತವೆ. ಧನಲಾಭ ಇದೆ. ನೌಕರಿಯಲ್ಲಿ ಬಡ್ತಿ ನಿಮ್ಮ ಕಾರ್ಯಕ್ಕೆ ಪ್ರಶಂಸೆ ಸಿಗುತ್ತದೆ. ನಿಮ್ಮ ಹಿಂದೆ ಪಿತೂರಿ ಮಾಡುವವರ ಬಣ್ಣ ಬಯಲಾಗಿ ನಿಮಗೆ ಜಯ ಸಿಗುತ್ತದೆ. ಕುಟುಂಬದಲ್ಲಿ ಶುಭಕಾರ್ಯದ ಸಡಗರ ಇದೆ.

ಮೀನ ರಾಶಿ

ರಾಶಿಯಲ್ಲೇ ಗುರು ಮನೋವ್ಯಥೆ ಹೆಚ್ಚಿಸುತ್ತಾನೆ. ಶನಿಯ ದೃಷ್ಟಿಯೂ ಇರುವುದರಿಂದ ಇನ್ನೂ ಕಿರಿಕಿರಿ. ಆದರೆ ಶನಿಯು ಧನಲಾಭವನ್ನೂ ಕೊಡುತ್ತಾನೆ. ನಾಲ್ಕರ ಶುಕ್ರ ಬಂಧುಗಳಿಂದ ಸಹಾಯ ಬೆಂಬಲ ಕೊಡಿಸುತ್ತಾನೆ. ಕೆಲಸ ಕಾರ್ಯಗಳಲ್ಲಿ ನಿಧಾನಪ್ರಗತಿ. ದೇಹಕ್ಕೆ ಆಲಸ್ಯ.