ಮನೆ ರಾಜ್ಯ ಸಿಇಟಿ ಫಲಿತಾಂಶ ಪ್ರಕಟ: ಅಪೂರ್ವಗೆ ಫಸ್ಟ್​ ರ‍್ಯಾಂಕ್​​​

ಸಿಇಟಿ ಫಲಿತಾಂಶ ಪ್ರಕಟ: ಅಪೂರ್ವಗೆ ಫಸ್ಟ್​ ರ‍್ಯಾಂಕ್​​​

0

ಬೆಂಗಳೂರು(Bengaluru): 2021- 22ನೇ ಸಾಲಿನ ಸಿಇಟಿ ಪರೀಕ್ಷಾ ಫಲಿತಾಂಶ ಪ್ರಕಟಗೊಂಡಿದ್ದು, ಈ ಬಾರಿಯ ಬಾಲಕರು ಮೇಲುಗೈ ಸಾಧಿಸಿದ್ದಾರೆ.

ಇಂದು ಮಲ್ಲೇಶ್ವರಂ ಬಳಿ ಇರುವ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಲ್ಲಿ ಉನ್ನತ ಶಿಕ್ಷಣ ಸಚಿವ ಅಶ್ವಥ್ ನಾರಾಯಣ ಸುದ್ದಿಗೋಷ್ಠಿ ನಡೆಸಿ ಫಲಿತಾಂಶ ಪ್ರಕಟಿಸಿದರು.

ಇಂಜಿನಿಯರಿಂಗ್​ನಲ್ಲಿ ಯಲಹಂಕದ ನ್ಯಾಷನಲ್​ ಪಬ್ಲಿಕ್​ ಸ್ಕೂಲ್​ ವಿದ್ಯಾರ್ಥಿನಿಯಾದ ಅಪೂರ್ವ (ಶೇ.97) ಮೊದಲ ಸ್ಥಾನ ಪಡೆದಿದ್ದಾರೆ. ಮಾರತಹಳ್ಳಿಯ ಶ್ರೀಚೈತನ್ಯ ಟೆಕ್ನೋ ಸ್ಕೂಲ್​ನ ಸಿದ್ಧಾರ್ಥ್ ಸಿಂಗ್​ (ಶೇ.97) ದ್ವಿತೀಯರಾಗಿದ್ದಾರೆ.

ಕೆಇಎ ವೆಬ್​ಸೈಟ್​​ kea.kar.nic.in ನಲ್ಲಿಯೂ ಫಲಿತಾಂಶ ವೀಕ್ಷಿಸಬಹುದಾಗಿದೆ. ಜೂನ್ 16 ರಿಂದ 18ರವರೆಗೆ ಇಂಜಿನಿಯರಿಂಗ್, ಕೃಷಿ, ಪಶು ವೈದ್ಯಕೀಯ, ಫಾರ್ಮಸಿ ಹೀಗೆ ಮುಂತಾದ ವೃತ್ತಿಪರ ಕೋರ್ಸುಗಳಿಗೆ ಪರೀಕ್ಷೆ ನಡೆದಿತ್ತು.