ಮನೆ Uncategorized ಮಹಾನಗರ ಪಾಲಿಕೆ ಆಶ್ರಯ ಶಾಖೆಗೆ ಎಲ್.ನಾಗೇಂದ್ರ ಭೇಟಿ, ಪರಿಶೀಲನೆ

ಮಹಾನಗರ ಪಾಲಿಕೆ ಆಶ್ರಯ ಶಾಖೆಗೆ ಎಲ್.ನಾಗೇಂದ್ರ ಭೇಟಿ, ಪರಿಶೀಲನೆ

0

ಮೈಸೂರು(Mysuru): ನಗರದ ವಿ.ವಿ.ಮೊಹಲ್ಲಾದಲ್ಲಿರುವ ಮೈಸೂರು ಮಹಾನಗರ ಪಾಲಿಕೆ ಆಶ್ರಯ ಶಾಖೆಗೆ ಶಾಸಕ ಎಲ್.ನಾಗೇಂದ್ರ ದಿಢೀರ್ ಭೇಟಿ ನೀಡಿ, ಪರಿಶೀಲನೆ ನಡೆಸಿದರು.

ಇಂದು ಚಾಮರಾಜ ವಿಧಾನ ಸಭಾ ಕ್ಷೇತ್ರದ ಆಶ್ರಯ ಸಮಿತಿ ಸದಸ್ಯರೊಂದಿಗೆ  ಆಶ್ರಯ ಶಾಖೆಗೆ ಭೇಟಿ ನೀಡಿದ ಶಾಸಕರು, ಚಾಮರಾಜ ಆಶ್ರಯ ಯೋಜನೆ ಕೆಲಸಗಳ ಪ್ರಗತಿ, ಹಕ್ಕು ಖುಲಾಸೆ ಪತ್ರ ವಿತರಣೆ ಕಾರ್ಯಗಳು, ಕಂದಾಯ ನಿವೇಶಗಳ ಮಾಲೀಕರಿಗೆ ಹಕ್ಕು ಪತ್ರ ವಿತರಣೆ ಕುರಿತಂತೆ ಕೈಗೊಂಡಿರುವ ಕ್ರಮಗಳು, ಕಚೇರಿ ಕಾರ್ಯವಿಧಾನಗಳ ಕುರಿತಂತೆ ಪರಿಶೀಲನೆ ನಡೆಸಿದರು.

ಈ ಸಮಯದಲ್ಲಿ ಹಾಜರಿದ್ದ ಸಾರ್ವಜನಿಕರ ಕುಂದುಕೊರತೆಗಳನ್ನು ಆಲಿಸಿದರು. ಈ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲ ಅಧಿಕಾರಿ ನೌಕರರಿಗೆ ಕಟ್ಟು ನಿಟ್ಟಿನ ಸೂಚನೆ ನೀಡಿ ಯಾವುದೇ ಮಧ್ಯವರ್ತಿಗಳಿಗೆ ಅವಕಾಶ ನೀಡದಂತೆ ಸಾರ್ವಜನಿಕರ ಕೆಲಸ ಕಾರ್ಯಗಳನ್ನು ಶೀಘ್ರವಾಗಿ ಪರಿಹರಿಸುವಂತೆ ನಿರ್ದೇಶನ ನೀಡಿದರು.

ಈ ಸಂದರ್ಭದಲ್ಲಿ ಆಶ್ರಯ ಸಮಿತಿ ಸದಸ್ಯರುಗಳಾದ, ಅನೂಜ್ ಸರಸ್ವತ್, ಮಹೇಶ್, ಬಿ.ಎಲ್.ಎ1 ದಿನೇಶ್ ಗೌಡ, ಆಡಳಿತಾದಿಕಾರಿ ಉಮೇಶ್ ಮುಂತಾದವರು ಹಾಜರಿದ್ದರು.