ಮನೆ ಅಪರಾಧ ಬೈಕ್, ಆಟೋಗೆ ಅಪ್ಪಳಿಸಿದ ಕಾರು: ಆರು ಮಂದಿ ದುರ್ಮರಣ

ಬೈಕ್, ಆಟೋಗೆ ಅಪ್ಪಳಿಸಿದ ಕಾರು: ಆರು ಮಂದಿ ದುರ್ಮರಣ

0

ಗುಜರಾತ್‌(Gujarath): ಅತಿ ವೇಗವಾಗಿ ಚಲಿಸಿದ ಎಸ್‌ಯುವಿಯೊಂದು ಆಟೋ ರಿಕ್ಷಾ ಮತ್ತು ಮೋಟಾರ್‌ ಬೈಕ್‌ಗೆ ಅಪ್ಪಳಿಸಿದ ಪರಿಣಾಮ ಮೂವರು ಮಹಿಳೆಯರು ಸೇರಿದಂತೆ ಆರು ಮಂದಿ ಸಾವನ್ನಪ್ಪಿರುವ ಘಟನೆ ಆನಂದ್ ಜಿಲ್ಲೆಯಲ್ಲಿ ಗುರುವಾರ ಸಂಜೆ ನಡೆದಿದೆ.

ಕಾಂಗ್ರೆಸ್ ಶಾಸಕ ಪೂನಂಭಾಯಿ ಮಧಾಭಾಯಿ ಪಾರ್ಮರ್ ಅವರ ಅಳಿಯ ಖೇತನ್ ಪಢಿಯಾರ್ ಎಸ್‌ಯುವಿಯನ್ನು ಅಡ್ಡಾದಿಡ್ಡಿ ಚಲಾಯಿಸಿ ವಾಹನಗಳ ಮೇಲೆ ಹರಿಸಿದ್ದಾನೆ ಎಂದು ಆರೋಪಿಸಲಾಗಿದೆ. ಆರೋಪಿ ಖೇತನ್‌ನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸೋಜಿತ್ರಾ ಗ್ರಾಮದ ಸಮೀಪ ತಾರಾಪುರದ ಜತೆ ಆನಂದ್ ಪಟ್ಟಣವನ್ನು ಸಂಪರ್ಕಿಸುವ ರಾಜ್ಯ ಹೆದ್ದಾರಿಯಲ್ಲಿ ಈ ಅಪಘಾತ ಸಂಭವಿಸಿದೆ.

ವೇಗವಾಗಿ ಸಾಗುತ್ತಿದ್ದ ಕಿಯಾ ಸೆಲ್ಟೋಸ್ ಎಸ್‌ಯುವಿ, ಸೋಜಿತ್ರಾ ಹೆದ್ದಾರಿಯಲ್ಲಿ ಆಟೋರಿಕ್ಷಾ ಮತ್ತು ಬೈಕ್‌ಗೆ ಹಿಂದಿನಿಂದ ಬಲವಾಗಿ ಗುದ್ದಿದೆ. ಮೃತರನ್ನು ಸೋಜಿತ್ರಾದ ನವಗಢ ಗ್ರಾಮದ ನಿವಾಸಿಗಳಾದ ಜಿಯಾಬೆನ್ ಮಿಸ್ತ್ರಿ ಮತ್ತು ಜಾವ್ನಿಬೆನ್ ಮಿಸ್ತ್ರಿ, ಅವರ ತಾಯಿ ವಿನಾಬೆನ್ ಮಿಸ್ತ್ರಿ, ಆಟೋರಿಕ್ಷಾ ಚಾಲಕ ಯಾಸನ್ ವೊಹ್ರಾ, ಆನಂದ್ ನಿವಾಸಿಗಳಾದ ಯೋಗೇಶ್ ಓದ್ ಮತ್ತು ಸಂದೀಪ್ ಓದ್ ಎಂದು ಗುರುತಿಸಲಾಗಿದೆ.

ಐಪಿಸಿ ಸೆಕ್ಷನ್ 304ರ ಅಡಿ ಪ್ರಕರಣ ದಾಖಲಿಸಲಾಗಿದೆ.