ಮನೆ ರಾಜ್ಯ ಸಾರ್ವಜನಿಕ ಗಣೇಶೋತ್ಸವಕ್ಕೆ ಮುಕ್ತ ಅವಕಾಶ ನೀಡಿ: ಪ್ರಮೋದ್ ಮುತಾಲಿಕ್

ಸಾರ್ವಜನಿಕ ಗಣೇಶೋತ್ಸವಕ್ಕೆ ಮುಕ್ತ ಅವಕಾಶ ನೀಡಿ: ಪ್ರಮೋದ್ ಮುತಾಲಿಕ್

0

ದಾವಣಗೆರೆ(Davanagere): ಈ ಬಾರಿ ಸಾರ್ವಜನಿಕ ಗಣೇಶೋತ್ಸವಕ್ಕೆ ಮುಕ್ತ ಅವಕಾಶ ನೀಡಬೇಕು ಎಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.ಸಾರ್ವಜನಿಕ ಗಣೇಶೋತ್ಸವಕ್ಕೆ ನಿರ್ಬಂಧ ಹಿನ್ನೆಲೆ ಈ ಬಗ್ಗೆಇಂದು ಪ್ರತಿಕ್ರಿಯಿಸಿರುವ ಅವರು, ಗಣೇಶೋತ್ಸವಕ್ಕೆ ಅನುಮತಿ ಪಡೆಯಲು ಅಲೆದಾಡಬೇಕು. ಹೀಗಾಗಿ ಒಂದೆ ಕಡೆ ಕೌಂಟರ್ ಮಾಡಿ ಅನುಮತಿ ನೀಡಿ. ನಮಾಜ್ ಮಾಡಲು ಅವಕಾಶ ನೀಡುತ್ತೀರಿ.  ಹಾಗೆಯೇ  ನಮಗೆ ಗಣೇಶೊತ್ಸವಕ್ಕೆ ಮುಕ್ತ ಅವಕಾಶ ನೀಡಿ ಎಂದು ಒತ್ತಾಯಿಸಿದರು.

ಈದ್ಗಾ ಮೈದಾನ ಈಗ ಸರ್ಕಾರಿ ಜಾಗವಾಗಿದೆ.  ಜಮೀರ್, ಮುಸ್ಲಿಂ ನಾಯಕರ,  ಬಾಯಿ ಬಂದ್ ಆಗಿದೆ. ಜಮೀರ್ ಕೇವಲ  ಮುಸ್ಲಿಂರಿಗೆ ಶಾಸಕರಲ್ಲ. ಚಾಮರಾಜಪೇಟೆಗೆ ಶಾಸಕ. ನೀವೇ ಮುಂದೆ ನೀಂತು ಗಣೇಶೋತ್ಸವ ಮಾಡಿಸಬೇಕು ಎಂದು  ಪ್ರಮೋದ್ ಮುತಾಲಿಕ್ ತಿಳಿಸಿದರು.