ಮನೆ ರಾಜ್ಯ ರಾಜ್ಯದ ಹಲವೆಡೆ 5 ದಿನ ಮಳೆ ಸಾಧ್ಯತೆ

ರಾಜ್ಯದ ಹಲವೆಡೆ 5 ದಿನ ಮಳೆ ಸಾಧ್ಯತೆ

0

ಬೆಂಗಳೂರು (Bengaluru): ರಾಜ್ಯದ ಹಲವೆಡೆ ಮುಂದಿನ ಐದು ದಿನಗಳ ಕಾಲ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ರಾಜ್ಯದ ಕರಾವಳಿ ಭಾಗದಲ್ಲಿ ಇಂದು, ನಾಳೆ ಭಾರೀ ಮಳೆಯಾಗಲಿದ್ದು, ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಕೊನೆಯ ಮೂರು ದಿನ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಮತ್ತೊಂದೆಡೆ ಇಂದು ಉತ್ತರ ಒಳನಾಡಿನ ಬಹುತೇಕ ಭಾಗಗಳಲ್ಲಿ ಸಾಧಾರಣ ಮಳೆಯಾಗಲಿದ್ದು, ದಕ್ಷಿಣ ಒಳನಾಡಿನ ಕೊಡಗು, ಚಿಕ್ಕಮಗಳೂರು, ಹಾಸನ, ಶಿವಮೊಗ್ಗ ಜಿಲ್ಲೆಗಳಿಗೆ ಇಂದು ನಾಳೆ ಯಲ್ಲೋ ಆಲರ್ಟ್ ಸೂಚಿಸಲಾಗಿದೆ. ಉಳಿದಂತೆ ರಾಜ್ಯದ ಇತರೆ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಲಿದೆ.

ರಾಜಧಾನಿ ಬೆಂಗಳೂರಿನಲ್ಲಿಂದು ಗರಿಷ್ಟ ಉಷ್ಣಾಂಶ 27 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 19 ಡಿಗ್ರಿ ಸೆಲ್ಸಿಯಸ್ ಇರಲಿದೆ. ಬಳ್ಳಾರಿ, ರಾಯಚೂರು ಮತ್ತು ಯಾದಗಿರಿ ಜಿಲ್ಲೆಯಲ್ಲಿ ಗರಿಷ್ಟ ಉಷ್ಣಾಂಶ ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ ಡಿಗ್ರಿ ಸೆಲ್ಸಿಯಸ್ ಇರಲಿದೆ.

ಉಳಿದಂತೆ ಮಂಗಳೂರಿನಲ್ಲಿ 27-23, ಶಿವಮೊಗ್ಗದಲ್ಲಿ 27-21, ಬೆಳಗಾವಿಯಲ್ಲಿ 25-20, ಮೈಸೂರಿನಲ್ಲಿ 27-20, ಮಂಡ್ಯದಲ್ಲಿ 28-21, ಕೊಡಗಿನಲ್ಲಿ 22-17, ರಾಮನಗರದಲ್ಲಿ 28-21, ಹಾಸನದಲ್ಲಿ 25-19, ಚಾಮರಾಜನಗರದಲ್ಲಿ 27-20, ಚಿಕ್ಕಬಳ್ಳಾಪುರದಲ್ಲಿ 27-19, ಕೋಲಾರದಲ್ಲಿ 28-21, ತುಮಕೂರಿನಲ್ಲಿ 27-20, ಉಡುಪಿಯಲ್ಲಿ 27-24, ಚಿಕ್ಕಮಗಳೂರಿನಲ್ಲಿ 24-18, ದಾವಣಗೆರೆಯಲ್ಲಿ 28-21,
ಚಿತ್ರದುರ್ಗದಲ್ಲಿ 28-20, ಹಾವೇರಿಯಲ್ಲಿ 27-21, ಬಳ್ಳಾರಿಯಲ್ಲಿ 32-23, ಗದಗದಲ್ಲಿ 28-21, ಕೊಪ್ಪಳದಲ್ಲಿ 30-22, ರಾಯಚೂರಿನಲ್ಲಿ 32-23, ಯಾದಗಿರಿಯಲ್ಲಿ 32-23, ವಿಜಯಪುರದಲ್ಲಿ 30-21, ಬೀದರ್ ನಲ್ಲಿ 29-21, ಕಲಬುರಗಿಯಲ್ಲಿ 32-22, ಬಾಗಲಕೋಟೆಯಲ್ಲಿ 30-22 ಡಿಗ್ರಿ ಸೆಲ್ಸಿಯಸ್‌ ಇರಲಿದೆ.