ಮನೆ ಮನರಂಜನೆ ಆಗಸ್ಟ್‌ 27ಕ್ಕೆ ಅಭಿಷೇಕ್‌ ಅಂಬರೀಶರ ಹೊಸ ಸಿನಿಮಾ ಆರಂಭ

ಆಗಸ್ಟ್‌ 27ಕ್ಕೆ ಅಭಿಷೇಕ್‌ ಅಂಬರೀಶರ ಹೊಸ ಸಿನಿಮಾ ಆರಂಭ

0

ಬೆಂಗಳೂರು (Bengaluru): ನಟ ಅಭಿಷೇಕ್ ಅಂಬರೀಷ್ ‘ಬ್ಯಾಡ್‌ ಮ್ಯಾನರ್ಸ್’, ‘ಕಾಳಿ’ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಈಗ ‘ಅಯೋಗ್ಯ’ ಸಿನಿಮಾ ಖ್ಯಾತಿಯ ಮಹೇಶ್‌ ಕುಮಾರ್ ನಿರ್ದೇಶನದ ಹೊಸ ಸಿನಿಮಾದಲ್ಲೂ ಅಭಿಷೇಕ್ ನಟಿಸಲಿದ್ದು, ಸಿನಿಮಾಕ್ಕೆ ಆಗಸ್ಟ್ 27ರಂದು ಚಾಲನೆ ಸಿಗಲಿದೆ.

ಆಗಸ್ಟ್‌ 27 ರಂದು ಸುಮಲತಾ ಅಂಬರೀಷ್ ಅವರ ಜನ್ಮದಿನವಿದ್ದು, ಅಂದೇ ಈ ಸಿನಿಮಾಕ್ಕೆ ಚಾಲನೆ ಸಿಗಲಿದೆ. ಕಂಠೀರವ ಸ್ಟುಡಿಯೋದಲ್ಲಿರುವ ಅಂಬರೀಷ್ ಸ್ಮಾರಕದ ಎದುರು ಫಸ್ಟ್‌ ಲುಕ್ ಮೋಷನ್ ಪೋಸ್ಟರ್ ಹಾಗೂ ನಿರ್ಮಾಪಕರ ಹೆಸರನ್ನು ಘೋಷಣೆ ಮಾಡಲಾಗುತ್ತಿದೆ.

‘ಇದೊಂದು ಮಾಸ್‌ ಓರಿಯೆಂಟೆಡ್‌ ಕಥೆ. ಅಭಿಷೇಕ್ ಅಂಬರೀಷ್ ನಟನೆಯ ‘ಅಮರ್‌’, ‘ಬ್ಯಾಡ್‌ ಮ್ಯಾನರ್ಸ್‌’, ‘ಕಾಳಿ’ ಚಿತ್ರಗಳಿಗಿಂತ ಈ ಸಿನಿಮಾ ಭಿನ್ನ ಜಾನರ್‌ನಲ್ಲಿ ಮೂಡಿಬರಲಿದೆ. ಈ ಸಿನಿಮಾ ಆ್ಯಕ್ಷನ್‌ ಥ್ರಿಲ್ಲರ್‌ ಆಗಿದ್ದು, ಇದರಲ್ಲಿ ದಂಗೆಯ ಕಥೆ ಬರುತ್ತದೆ. ಅಭಿಷೇಕ್ ಪಾತ್ರ ಸಂಪೂರ್ಣವಾಗಿ ವಾರಿಯರ್‌ನಂತೆ ಇರುತ್ತದೆ. ಇದರರ್ಥ ಅವರು ಸೈನಿಕರಲ್ಲ, ಆ ಪಾತ್ರದ ವಿವರಗಳು ಹಾಗಿರುತ್ತದೆ ಅಷ್ಟೇ. ದಂಗೆ, ಹೋರಾಟ ಇರುವುದರಿಂದ ಕೆಸರು ಮತ್ತು ರಕ್ತ ಅವರ ಮುಖಕ್ಕೆ ಅಂಟಿಕೊಂಡಂತೆ ಇರುವ ಫಸ್ಟ್‌ ಲುಕ್‌ ರಿವೀಲ್‌ ಮಾಡಿದ್ದೇವೆ. ಅವರ ಇಡೀ ಪಾತ್ರ ಇದೇ ರೀತಿಯಲ್ಲಿ ಮಾಸ್‌ ಅಪೀಲ್‌ನಲ್ಲಿರುತ್ತದೆ. ಆರು ತಿಂಗಳ ಹಿಂದೆಯೇ ಅಭಿಷೇಕ್‌ಗೆ ಕಥೆ ಹೇಳಿದ್ದೆ. ಅವರು ಬಹಳ ಇಷ್ಟಪಟ್ಟು ಓಕೆ ಮಾಡಿದ ಕಥೆಯಿದು’ ಎನ್ನುತ್ತಾರೆ ಮಹೇಶ್‌ ಕುಮಾರ್‌.