ಮನೆ ರಾಜ್ಯ ಸಮಸ್ಯೆಗೆ ತಾರ್ಕಿಕ ಅಂತ್ಯ ಹಾಡೋಣ: ಮುರುಘಾ ಶರಣರು

ಸಮಸ್ಯೆಗೆ ತಾರ್ಕಿಕ ಅಂತ್ಯ ಹಾಡೋಣ: ಮುರುಘಾ ಶರಣರು

0

ಚಿತ್ರದುರ್ಗ(Chitradurga): ಮುರುಘಾ ಶರಣರ ವಿರುದ್ಧ ಲೈಂಗಿಕ ಪ್ರಕರಣಕ್ಕೆ ಸಂಬಂಧಿಸಿದಂತೆ ಎದುರಾಗಿರುವ ಸಮಸ್ಯೆಯನ್ನು ಎಲ್ಲರೂ ಸೇರಿ ಒಟ್ಟಾಗಿ ಎದುರಿಸಿ, ತಾರ್ಕಿಕ ಅಂತ್ಯ ಹಾಡೋಣ ಎಂದು ಮುರುಘಾ ಶರಣರು ಹೇಳಿದ್ದಾರೆ.

ಚಿತ್ರದುರ್ಗದ ಮುರುಘಾ ಮಠದಲ್ಲಿ ಮಾತನಾಡಿದ ಅವರು, ಭಕ್ತರು ಯಾವುದೇ ಕಾರಣಕ್ಕೂ ಆತಂಕಕ್ಕೆ ಒಳಗಾಗಬೇಡಿ. ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಮಾಡಬೇಕು. ಇದು ಮೊದಲಲ್ಲ, ಈತರ 15 ವರ್ಷಗಳಿಂದ ಘಟನೆಗಳು ನಡೆಯುತ್ತಲಿವೆ. ಮಠದ ಒಳಗಡೆ ಪಿತೂರಿಗಳು ನಡೆಯುತ್ತಿವೆ ಎಂದರು.

ಈ ನೆಲದ ಕಾನೂನು ಗೌರವಿಸುವಂತಹ ಮಠಾಧೀಶರಾಗಿದ್ದೇವೇ. ಪೀಠಾಧ್ಯಕ್ಷರಾಗಿದ್ದೇವೆ. ಈ ಸಮಸ್ಯೆಗೆ ಎಲ್ಲ ರೀತಿಯ ಸಹಕಾರ ಕೊಡುತ್ತೇವೆ. ಯಾವುದೇ ಊಹಾಪೋಹಗಳಿಗೆ ಅವಕಾಶ ಇಲ್ಲ. ಈ ಸಮಸ್ಯೆಗೆ ಗಟ್ಟಿಯಾಗಿ ನಿಂತುಕೊಳ್ಳುತ್ತೇವೆ ಎಂದು ತಿಳಿಸಿದರು.

ಇಂತಹ ಗಾಳಿ ಸುದ್ದಿಗಳನ್ನು ನಂಬಬಾರದು ಎಂದ ಶ್ರೀಗಳು, ಮುರುಘಾ ಮಠ ಒಂದಾನೊಂದು ಕಾಲದಲ್ಲಿ ನ್ಯಾಯಾಲಯವಾಗಿತ್ತು. ಮುರುಘಾ ಮಠ ಪ್ರೀತಿಯಿಂದ ಅಕ್ಕರೆಯಿಂದ ನೋಡಿಕೊಂಡು ಬಂದಿರುವ ಮಠ. ಸಮಸ್ಯೆಯಿಂದ ಮುಕ್ತವಾಗಿ ಹೊರ ಬರುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.