ನಟಿ ಮೇಘನಾ ರಾಜ್ ಸರ್ಜಾ ಅವರು ಮತ್ತೆ ಸಿನಿಮಾರಂಗದಲ್ಲಿ ಸಕ್ರಿಯರಾಗಿದ್ದಾರೆ. ಈಚೆಗಷ್ಟೇ ಅವರ ನಟನೆಯ ‘ಸೆಲ್ಫಿ ಮಮ್ಮಿ ಗೂಗಲ್ ಡ್ಯಾಡಿ’ ಸಿನಿಮಾವು ತೆರೆಕಂಡು, ಉತ್ತಮ ಪ್ರತಿಕ್ರಿಯೆ ಈ ಮಧ್ಯೆ ಸಿನಿಮಾರಂಗದಿಂದ ಬ್ರೇಕ್ ಕೂಡ ತೆಗೆದುಕೊಂಡಿದ್ದರು. ಅದರೀಗ ಬಣ್ಣದ ಲೋಕದಲ್ಲಿ ಸಕ್ರಿಯವಾಗಿರುವ ಮೇಘನಾ, ಪನ್ನಗ ಭರಣ ನಿರ್ಮಾಣದ ಸಿನಿಮಾವೊಂದನ್ನು ಒಪ್ಪಿಕೊಂಡಿದ್ದರು. ಇನ್ನೂ ಹೆಸರಿಡದ ಈ ಸಿನಿಮಾದಲ್ಲಿ ಮೇಘನಾ ಜೊತೆಗೆ ಪ್ರಜ್ವಲ್ ದೇವರಾಜ್ ಕೂಡ ಬಣ್ಣ ಹಚ್ಚಿದ್ದಾರೆ.
ಕಳೆದ ವರ್ಷ ತೆರೆಕಂಡ ‘ಇನ್ಸ್ಪೆಕ್ಟರ್ ವಿಕ್ರಂ’ ಸಿನಿಮಾದಲ್ಲಿ ಪ್ರಜ್ವಲ್ ದೇವರಾಜ್ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದರು. ಸದ್ಯ ಚಿತ್ರೀಕರಣ ನಡೆಯುತ್ತಿರುವ ‘ಮಾಫಿಯಾ’ ಸಿನಿಮಾದಲ್ಲೂ ಪ್ರಜ್ವಲ್ಗೆ ಪೊಲೀಸ್ ಆಫೀಸರ್ ರೋಲ್ ಇದೆ. ಈಗ ಮೇಘನಾ ಮುಖ್ಯಭೂಮಿಕೆಯಲ್ಲಿರುವ ಹೊಸ ಸಿನಿಮಾದಲ್ಲೂ ಪೊಲೀಸ್ ಆಫೀಸರ್ ಪಾತ್ರ ಮಾಡಿದ್ದಾರೆ ಪ್ರಜ್ವಲ್ ದೇವರಾಜ್. ಇದೊಂದು ಕ್ರೈಮ್ ಥ್ರಿಲ್ಲರ್ ಸಿನಿಮಾವಾಗಿದ್ದು, ಈಗಾಗಲೇ ಪ್ರಜ್ವಲ್ ಅವರ ಚಿತ್ರೀಕರಣ ಮುಕ್ತಾಯವಾಗಿದೆ. ವಿಶಾಲ್ ಈ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ.
ಈ ಹಿಂದೆ ಫ್ರೆಂಚ್ ಬಿರಿಯಾನಿ, ಹ್ಯಾಪಿ ನ್ಯೂ ಇಯರ್ ಸಿನಿಮಾಗಳನ್ನು ನಿರ್ದೇಶನ ಮಾಡಿದ್ದ ಪನ್ನಗ ಭರಣ, ಈ ಸಿನಿಮಾದ ಮೂಲಕ ನಿರ್ಮಾಕರಾಗಿದ್ದಾರೆ. ಈ ಸಿನಿಮಾಗೆ ವಾಸುಕಿ ವೈಭವ್ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ಚಿತ್ರದ ಶೀರ್ಷಿಕೆ ಏನು? ಚಿತ್ರದಲ್ಲಿ ಯಾರೆಲ್ಲ ನಟಿಸಿದ್ದಾರೆ ಎಂಬ ಬಗ್ಗೆ ಇನ್ನಷ್ಟೇ ಮಾಹಿತಿ ಹೊರಬೀಳಬೇಕಿದೆ.
ಈ ಚಿತ್ರದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದ ಮೇಘನಾ ರಾಜ್, ಈ ಚಿತ್ರ ನನಗೆ ಸಿಕ್ಕಿದ್ದು ಸರ್ಪ್ರೈಸ್. ಮೊದಲು ಕಥೆ ಕೇಳಿ ಎಂದಾಗ ನನಗೆ ಆಫರ್ ಮಾಡುತ್ತಿದ್ದಾರೆ ಎಂದು ಗೊತ್ತಿರಲಿಲ್ಲ. ಪನ್ನಗ ಹೊಸ ಚಿತ್ರ ಮಾಡುವುದಕ್ಕೆ ನನ್ನ ಸಲಹೆ ಕೇಳುತ್ತಿದ್ದಾರೆ ಎಂದುಕೊಂಡಿದ್ದೆ. ಕಥೆ ಕೇಳಿದಾಗ ಸಿಕ್ಕಾಪಟ್ಟೆ ಇಷ್ಟವಾಯಿತು. ಸ್ವಲ್ಪ ದಿನ ಗುಂಗಲ್ಲಿದ್ದೆ. ಆಮೇಲೆ ಪನ್ನಗ ಈ ಸಿನಿಮಾ ನೀನು ಮಾಡಬೇಕು ಅಂದಾಗ ಇದು ಚಿರುನೇ ಮಾಡಿಸುತ್ತಿರುವುದು ಎನ್ನಿಸಿತು. ಚಿರು ಮತ್ತು ನನ್ನ ಎಲ್ಲಾ ಖುಷಿ, ನೋವಿನ ಸಂದರ್ಭಗಳಲ್ಲಿ ಸ್ನೇಹಿತರು ನಮ್ಮ ಜತೆಗೆ ಇದ್ದವರು. ಈ ಸಿನಿಮಾದ ಪಾತ್ರವನ್ನು ನಾನು ಇದುವರೆಗೆ ಎಲ್ಲೂ ಮಾಡಿಲ್ಲ. ತುಂಬಾ ಚೆನ್ನಾಗಿದೆ’ ಎಂದು ಮಾಹಿತಿ ಹಂಚಿಕೊಂಡಿದ್ದರು.
ಇನ್ನು, ಪ್ರಜ್ವಲ್ ದೇವರಾಜ್ ಅವರು ಸಿಕ್ಕಾಪಟ್ಟೆ ಬ್ಯುಸಿ ಇದ್ದಾರೆ. ಖದರ್ ಕುಮಾರ್ ನಿರ್ದೇಶನದ ‘ವೀರಂ’ ಹಾಗೂ ಕೆ. ರಾಮ್ ನಾರಾಯಣ್ ನಿರ್ದೇಶನದ ‘ಅಬ್ಬರ’ ಸಿನಿಮಾಗಳಲ್ಲಿ ಪ್ರಜ್ವಲ್ ದೇವರಾಜ್ ನಟಿಸಿದ್ದಾರೆ. ಇವರೆಡೂ ಸಿನಿಮಾಗಳು ರಿಲೀಸ್ಗೆ ಸಿದ್ಧವಾಗಿವೆ. ಜೊತೆಗೆ ಲೋಹಿತ್ ನಿರ್ದೇಶನದ ‘ಮಾಫಿಯಾ’ ಹಾಗೂ ಹರಿಪ್ರಸಾದ್ ಜಕ್ಕ ನಿರ್ದೇಶನದ ‘ಗಣ’ ಸಿನಿಮಾಗಳಲ್ಲೂ ಪ್ರಜ್ವಲ್ ಬಣ್ಣ ಹಚ್ಚಿದ್ದಾರೆ. ಆ ಸಿನಿಮಾಗಳ ಶೂಟಿಂಗ್ ಬಿರುಸಿನಿಂದ ಸಾಗಿದೆ.
ಲೆಮನ್ ಜ್ಯೂಸ್ ಆರೋಗ್ಯಕ್ಕೆ ಉತ್ತಮ..!
ಜೈಲಿನಲ್ಲಿರುವವರು ಮತ ಚಲಾಯಿಸಬಹುದೇ ?
ಉದ್ಯೋಗ ಅವಕಾಶ, ಆನ್ಲೈನಲ್ಲಿ ಅರ್ಜಿ ಸಲ್ಲಿಸಿ….
ಯಾಕೆ ಮೇ 8ನ್ನ ವಿಶ್ವ ರೆಡ್ ಕ್ರಾಸ್ ದಿನ ಎಂದು ಆಚರಿಸಲಾಗುತ್ತದೆ
ಬೆಂಗಳೂರಿನಲ್ಲಿ ಭೂಕುಸಿತ
ಸುನಿತಾ ಜೊತೆ ಗಗನಕ್ಕೇರಿದ ಭಗವದ್ಗೀತೆ, ಗಣೇಶ ಮೂರ್ತಿ..!
ಮೈಸೂರಿನ ಹೆಬ್ಬಾಳ್ ಕೆರೆಯಲ್ಲಿ ಮೀನುಗಳ ಮಾರಣಹೋಮ….
ಸುಳ್ಳು ಮಾಹಿತಿಯನ್ನ ಸ್ಪಷ್ಟಪಡಿಸಿದ ಆರೋಗ್ಯ ಇಲಾಖೆ..
ಹನುಮ ಕೇಸರಿಯಾದ ಕಥೆ….
Important: No API Key Entered.
Many features are not available without adding an API Key. Please go to the YouTube Feed settings page to add an API key after following these instructions.