ಮನೆ ರಾಜ್ಯ ಜನಸ್ಪಂದನ ಟೀಕಿಸುವ ಮೊದಲು ಸಿದ್ದರಾಮೋತ್ಸವದ ಲೆಕ್ಕ ನೀಡಿ: ಕೆ.ಎಸ್.ಈಶ್ವರಪ್ಪ

ಜನಸ್ಪಂದನ ಟೀಕಿಸುವ ಮೊದಲು ಸಿದ್ದರಾಮೋತ್ಸವದ ಲೆಕ್ಕ ನೀಡಿ: ಕೆ.ಎಸ್.ಈಶ್ವರಪ್ಪ

0

ಶಿವಮೊಗ್ಗ(Shivamogga): ಜನಸ್ಪಂದನ ಕಾರ್ಯಕ್ರಮವನ್ನು ಟೀಕಿಸುವ ಮೊದಲು ಸಿದ್ದರಾಮೋತ್ಸವ ಕಾರ್ಯಕ್ರಮದ ಲೆಕ್ಕ ನೀಡಲಿ. ಯಾವುದಕ್ಕೆ ಎಷ್ಟು ಖರ್ಚು ಮಾಡಲಾಗಿದೆ ಎಂಬುದನ್ನು ತಿಳಿಸಲಿ ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಸಿದ್ದರಾಮಯ್ಯನವರಿಗೆ ಸವಾಲು ಹಾಕಿದ್ದಾರೆ.

ಶಿವಮೊಗ್ಗದ ಗಾಂಧಿ ನಗರ ಬಡಾವಣೆಯಲ್ಲಿ ಮಹಾನಗರ ಪಾಲಿಕೆ ವತಿಯಿಂದ ನಡೆಯುವ 3 ಕೋಟಿ ವೆಚ್ಚದ ನೂತನ ಸಂಕಿರ್ಣದ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಮೊನ್ನೆ ಮಂಗಳೂರಿಗೆ ಪ್ರಧಾನಿ ಮೋದಿ ಬಂದಾಗ ಜನಸಾಗರವೇ ಸೇರಿತ್ತು. ಇಂದು ಜನಸ್ಪಂದನವು ಯಶಸ್ವಿಯಾಗಿ ನಡೆಯುತ್ತಿದೆ. ಇದನ್ನು ನೋಡಲಾಗದೇ ಸಿದ್ದರಾಮಯ್ಯ ಮಾತಾಡುತ್ತಿದ್ದಾರೆ ಎಂದು ಹೇಳಿದರು.

ನಿನ್ನೆ ಶಿವಮೊಗ್ಗದಲ್ಲಿ ಹಿಂದು ಸಂಘಟನಾ ಮಹಾಮಂಡಳದ ಗಣಪತಿಯ ರಾಜಬೀದಿ ಉತ್ಸವ ಶಾಂತಿಯುತವಾಗಿ ನಡೆದಿದೆ. ನಾನು ಶಿವಮೊಗ್ಗದಲ್ಲಿಯೇ ಹುಟ್ಟಿ ಬೆಳೆದವನು, ನಾನು ಹಿಂದೆಂದೂ ನೋಡದ ಜನ ಸಾಗರ ನೋಡಿದೆ. ಮಹಿಳೆಯರು, ಯುವತಿಯರು ಮೆರವಣಿಗೆಯಲ್ಲಿ ಭಾಗಿಯಾಗಿದ್ದು, ನೋಡಿ ಖುಷಿಯಾಗಿದೆ. ಇನ್ನು ಮುಂದೆ ಇದೇ ರೀತಿ ಶಾಂತಿಯುತವಾಗಿ ನಡೆಯುತ್ತದೆ. ಶಾಂತಿ ಕದಡುವವರಿಗೆ ತಕ್ಕ ಪಾಠ ಕಲಿಸಲಾಗಿದೆ ಎಂದರು.