ಬಹು ನಿರೀಕ್ಷಿತ ಮಣಿರತ್ನಂ ನಿರ್ದೇಶನದ ಪೊನ್ನಿಯಿನ್ ಸೆಲ್ವನ್ ತೆರೆಗೆ ಬಂದಿದೆ.
ಮಣಿರತ್ನಂ ಸಿನಿಮಾ ಎಂದರೆ ನಿರೀಕ್ಷೆ ಹೆಚ್ಚು. ಗಟ್ಟಿಯಾದ ಕಥೆ, ಉತ್ತಮ ನಿರೂಪಣೆ ಜೊತೆಗೆ ಕಾಲಕ್ಕೆ ತಕ್ಕಂತೆ ದೃಶ್ಯಗಳನ್ನು ಶ್ರೀಮಂತಗೊಳಿಸುವಲ್ಲಿ ಎಂದಿಗೂ ಮಣಿರತ್ನಂ ಎಡವಿಲ್ಲ.
ಚಿಯಾನ್ ವಿಕ್ರಂ, ಐಶ್ವರ್ಯಾ ರೈ, ಜಯರಾಂ ರವಿ, ಕಾರ್ತಿ, ತ್ರಿಷಾ ಮೊದಲಾದ ದೊಡ್ಡ ತಾರಾ ಬಳಗವನ್ನು ಹೊಂದಿರುವ ಪೊನ್ನಿಯಿನ್ ಸೆಲ್ವನ್ಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಬಹುತೇಕ ವಿಮರ್ಶಕರು ಸಿನಿಮಾವನ್ನು ದೃಶ್ಯವೈಭವ ಎಂದು ಬಣ್ಣಿಸಿದ್ದಾರೆ. 2019ರಿಂದ 150 ದಿನಗಳ ಕಾಲ ಚಿತ್ರದ ಎರಡೂ ಭಾಗಗಳನ್ನು ಚಿತ್ರೀಕರಿಸಲಾಗಿದೆ ಎಂದು ನಟ ಜಯಂ ರವಿ ಸಂದರ್ಶನವೊಂದರಲ್ಲಿ ಹೇಳಿದ್ದರು.
1955ರಲ್ಲಿ ಪ್ರಕಟಿತ ಕಲ್ಕಿ ಕೃಷ್ಣಮೂರ್ತಿ ಅವರ ಕಾದಂಬರಿ ಆಧಾರಿತ ಐತಿಹಾಸಿಕ ಚಿತ್ರ ಪೊನ್ನಿಯಿನ್. ಹೀಗಾಗಿ ಮಣಿರತ್ನಂ ಸುಂದರ ದೃಶ್ಯಗಳನ್ನು ತೆರೆಯ ಮೇಲೆ ಕಟ್ಟಿಕೊಟ್ಟಿದ್ದಾರೆ. ಎ.ಆರ್.ರೆಹಮಾನ್ ದೃಶ್ಯಗಳಿಗೆ ತಕ್ಕಂತೆ ಅತ್ಯದ್ಬುತ ಸಂಗೀತ ನೀಡಿದ್ದಾರೆ ಎಂದು ಬಹುತೇಕ ವಿಮರ್ಶಕರು ಟ್ವೀಟ್ ಮಾಡಿದ್ದಾರೆ.
ಸಿನಿಮಾದ ಕುರಿತು ಟ್ವೀಟ್ ಮಾಡಿರುವ ನಟ ಕಾರ್ತಿ, ಇದು ಹಿಂದೆಂದೂ ಕಾಣದ ದೃಶ್ಯವೈಭವ. ಮಣಿರತ್ನಂ ಅವರಿಂದ ಅತ್ಯದ್ಬುತ ನಿರೂಪಣೆ. ಈ ಸಿನಿಮಾದ ಭಾಗವಾಗಿರುವುದಕ್ಕೆ ಹೆಮ್ಮೆ ಎನಿಸುತ್ತಿದೆ ಎಂದಿದ್ದಾರೆ.ತ್ರಿಷಾ ಹಾಗೂ ಐಶ್ವರ್ಯ ರೈ ಬಚ್ಚನ್ ಪಾತ್ರಗಳಿಗೆ ಮೆಚ್ಚುಗೆ ವ್ಯಕ್ತವಾಗಿದೆ. ಚೋಳರು ಅಬ್ಬರಿಸುತ್ತ ಬಂದಿದ್ದಾರೆ ಎಂಬಂತೆ ಅಭಿಮಾನಿಗಳು ಸಂತಸವ್ಯಕ್ತಪಡಿಸಿದ್ದಾರೆ.
ಸಿನಿಮಾದ ದ್ವಿತಿಯಾರ್ಧ ಸ್ವಲ್ಪ ಗಜಿಬಿಜಿಯಿಂದ ಕೂಡಿದೆ ಎಂಬ ಪ್ರತಿಕ್ರಿಯೆಗಳೂ ಬಂದಿವೆ. ಸದ್ಯ ಟ್ವಿಟರ್ನಲ್ಲಿ ಪೊನ್ನಿಯಿನ್ ವಿಮರ್ಶೆಗಳು ಅಬ್ಬರಿಸುತ್ತಿವೆ.
ಸಿನಿಮಾ ನೋಡಿದವರ ಪ್ರತಿಕ್ರಿಯೆ
• ಪೊನ್ನಿಯನ್ ಸೆಲ್ವನ್ ಸಿನಿಮಾ ಮಾಸ್ಟರ್ಪೀಸ್. ನನಗೆ ಪುಸ್ತಕ ಓದಿದ ಅನುಭವ ನೀಡಿತು. ಥಿಯೇಟರ್ನಲ್ಲಿ ಸಿನಿಮಾ ನೋಡಿ. ಅದ್ಭುತವಾದ ದೃಶ್ಯವೈಭವ ನೀಡುವುದು
• ಮೊದಲ ಭಾಗ ಚೆನ್ನಾಗಿದೆ. ಟ್ವಿಸ್ಟ್ ಎಲ್ಲವೂ ಓಕೆ, ಪಾತ್ರಗಳನ್ನು ಚೆನ್ನಾಗಿ ಬಳಸಿಕೊಂಡಿದ್ದಾರೆ. ಆದರೆ ಚಿತ್ರಕಥೆ ತುಂಬ ನಿಧಾನವಾಗಿದೆ’
• ಮೈ ರೋಮಾಂಚನಗೊಳ್ಳುವ ಯಾವುದೇ ದೃಶ್ಯವಿಲ್ಲ
• ಕ್ಲೈಮ್ಯಾಕ್ಸ್ನಲ್ಲಿ ಜಯಂ ರವಿ, ಕಾರ್ತಿ ಅದ್ಭುತವಾಗಿ ಕಾಣಿಸಿಕೊಂಡಿದ್ದಾರೆ
• ಬಿಜಿಎಂ ಸಖತ್ ಆಗಿದೆ
• ಅದ್ಭುತವಾಗಿಯೂ ಇಲ್ಲ, ಕೆಟ್ಟದಾಗಿಯೂ ಇಲ್ಲ, ಎವರೇಜ್ ಆಗಿದೆ
• ಐಶ್ವರ್ಯಾ ರೈ ಸೌಂದರ್ಯದ ಬಗ್ಗೆ ಇರುವ ಡೈಲಾಗ್ ಎಲ್ಲವೂ ನಿಜವೇ ಆಗಿವೆ
• ತ್ರಿಷಾ, ಕಾರ್ತಿ ಅವರ ದೃಶ್ಯಗಳು ಚೆನ್ನಾಗಿವೆ
• ರಾಜಮೌಳಿ ಸಿನಿಮಾ ಜೊತೆ ಈ ಚಿತ್ರವನ್ನು ಹೋಲಿಕೆ ಮಾಡಬೇಡಿ.
ಗ್ರಂಥಾಲಯ ಕಂ ಸಹಾಯಕ ಹುದ್ದೆಗೆ ಅರ್ಜಿ….
ಚಿಕ್ಕಬಳ್ಳಾಪುರ ಜಿಲ್ಲೆಯ ಆರು ತಾಲೂಕುಗಳಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹುದ್ದೆ…
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಿಂದ ಕೋ ಆರ್ಡಿನೇಟರ್ ಹುದ್ದೆಗಳು
ಹೆಚ್ಎಎಲ್ ಯಲ್ಲಿ ಅಪ್ರೆಂಟಿಸ್ ಹುದ್ದೆ
ಸಿಬ್ಬಂದಿ ನೇಮಕಾತಿ ಆಯೋಗ ಎಸ್ ಎಸ್ ಸಿ ಇಂದ 39,481 ಹುದ್ದೆಗಳ ನೇಮಕಾತಿ
ಚಿಕ್ಕಬಳ್ಳಾಪುರ ಗ್ರಾಮ ಪಂಚಾಯಿತಿಯಲ್ಲಿ ಗ್ರಂಥ ಪಾಲಕರು ಹಾಗೂ ಮೇಲ್ವಿಚಾರಕರ ಹುದ್ದೆಗಳು
ಮಂಗಳೂರಿನ ಸುರತ್ಕಲ್ ನಲ್ಲಿರುವ ಎನ್ ಐ ಟಿ ಕೆ ಯಲ್ಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ..
ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಫೆಲೋಶಿಪ್ ಹುದ್ದೆಗಳ ಭರ್ತಿ..
ರಾಮನಗರ ಜಿಲ್ಲೆ ವ್ಯಾಪ್ತಿಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹುದ್ದೆಗಳು..
Important: No API Key Entered.
Many features are not available without adding an API Key. Please go to the YouTube Feed settings page to add an API key after following these instructions.