ಮನೆ ರಾಜಕೀಯ ಭಾರತ್ ತೋಡೋ ಮಾಡಿದವರಿಂದಲೇ ಭಾರತ್ ಜೋಡೋ ಯಾತ್ರೆ: ಸಿಎಂ ಬೊಮ್ಮಾಯಿ

ಭಾರತ್ ತೋಡೋ ಮಾಡಿದವರಿಂದಲೇ ಭಾರತ್ ಜೋಡೋ ಯಾತ್ರೆ: ಸಿಎಂ ಬೊಮ್ಮಾಯಿ

0

ವಿಜಯಪುರ(Vijayapura): ಯಾರು ಭಾರತವನ್ನು ಎರಡು ದೇಶಗಳನ್ನಾಗಿ ಮಾಡಿ ಭಾರತ್ ತೋಡೋ ಮಾಡಿದ್ದರೋ ಅವರೇ ಇಂದು ಭಾರತ್ ಜೋಡೋ ಮಾಡುತ್ತಿದ್ದಾರೆ. ಇವತ್ತಿಗೂ ಆ ಗಾಯದ ಬರೆ ಯಾರೂ ಮರೆತಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ವಿಜಯಪುರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ನವರು ಭಾರತ್ ಜೋಡೋ ಯಾತ್ರೆ ಮಾಡುತ್ತಿರುವುದು ವಿಪರ್ಯಾಸ. ರಾಜಕೀಯ ಅಸ್ತಿತ್ವ ಉಳಿಸಿಕೊಳ್ಳಲು ಮಾಡುತ್ತಿದ್ದಾರೆ, ಮಾಡಲಿ ಎಂದರು.

ಯಾವ ಸಂಘಟನೆ ಕಾಂಗ್ರೆಸ್ ಶಾಸಕರ ಮೇಲೆ ಕೊಲೆ ಯತ್ನ ನಡೆಸಿತ್ತೋ ಅದೇ ಸಂಘಟನೆಯ ಪ್ರಕರಣವನ್ನೇ ಕಾಂಗ್ರೆಸ್ ಹಿಂಪಡೆದಿತ್ತು. ಇದಕ್ಕಿಂತ ತುಷ್ಟೀಕರಣದ ರಾಜಕಾರಣದ ಉದಾಹರಣೆ ಬೇಕಿಲ್ಲ. ಇದರ ಪರಿಣಾಮವಾಗಿಯೇ ಅವರು ಪಿಎಫ್​ಐ, ಕೆಎಫ್​’ಡಿ ಸಂಸ್ಥೆಗಳನ್ನು ಹುಟ್ಟುಹಾಕಿದ್ದಾರೆ. ಅದನ್ನು ದಮನ ಮಾಡುವ ಕೆಲಸವನ್ನು ಕೇಂದ್ರ ಸರ್ಕಾರ ಮಾಡಿದೆ. ಇದು ತುಷ್ಟೀಕರಣ ರಾಜಕಾರಣದ ಫಲ ಎಂದರು.

ಭಾರತ್ ಜೋಡೋ ಫ್ಲೆಕ್ಸ್​ಗಳನ್ನು ಕಾಂಗ್ರೆಸ್ ಪಕ್ಷದವರೇ ಹರಿದು ನಮ್ಮ ಮೇಲೆ ಹಾಕುತ್ತಿದ್ದಾರೆ ಎಂದು ನಮ್ಮ ಶಾಸಕರು ಈಗಾಗಲೇ ಹೇಳಿಕೆ ಕೊಟ್ಟಿದ್ದಾರೆ. ಭಾರತ್ ಜೋಡೋ ಯಾತ್ರೆ ಆರಂಭವಾಗಿರುವುದು ತಿಳಿದಿದೆ.

ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಹಾಗೂ ತಮ್ಮ ಜಂಟಿ ರಾಜ್ಯ ಪ್ರವಾಸ ದಸರಾ ಮುಗಿದ ಕೂಡಲೇ ಕೈಗೊಳ್ಳಲಾಗುವುದು ಎಂದರು.