ಮನೆ ಅಪರಾಧ ಕೊಲೆ ಮಾಡಿ ಶವ  ಬಿಸಾಕಲು ಬಂದಾಗ ಉರುಳಿಬಿದ್ದ ಕಾರು: ಆರೋಪಿಗಳು ಪೊಲೀಸರ ವಶಕ್ಕೆ

ಕೊಲೆ ಮಾಡಿ ಶವ  ಬಿಸಾಕಲು ಬಂದಾಗ ಉರುಳಿಬಿದ್ದ ಕಾರು: ಆರೋಪಿಗಳು ಪೊಲೀಸರ ವಶಕ್ಕೆ

0

ಹಾಸನ(Hassan): ತಾಲ್ಲೂಕಿನ ಶಾಂತಿಗ್ರಾಮದ ರೈಲ್ವೆ ಹಳಿಯ ಬಳಿ ಮಂಗಳವಾರ ಮಧ್ಯಾಹ್ನ ಕಾರೊಂದು ಉರುಳಿ ಬಿದ್ದಿದ್ದು, ಅದರಲ್ಲಿ ಶವ ಪತ್ತೆಯಾಗಿದೆ.

ಶಾಂತಿಗ್ರಾಮದ ಗಾಡೇನಹಳ್ಳಿ ಡಾಬಾದಲ್ಲಿ ಕೆಲಸ ಮಾಡುತ್ತಿದ್ದ ಆನಂದ್ ಎಂಬಾತನನ್ನು ಕೊಲೆ ಮಾಡಲಾಗಿದ್ದು, ಮೂವರು ಆರೋಪಿಗಳು ಸೇರಿ, ಶವವನ್ನು ಬಿಸಾಕಲು ರೈಲ್ವೆ ಹಳಿ ಬಳಿ ಬಂದಿದ್ದರು.

ಈ ಸಂದರ್ಭದಲ್ಲಿ ಕಾರು ಮೇಲಿನಿಂದ ಉರುಳಿ ಬಿದ್ದಿದೆ. ಮೂವರು ಆರೋಪಿಗಳು ಕಾರಿನಲ್ಲಿ ಸಿಲುಕಿಕೊಂಡಿದ್ದರು.ಈ ಮೂವರು ಆರೋಪಿಗಳು ಡಾಬಾ ಅಕ್ಕಪಕ್ಕದ ಪ್ರದೇಶಗಳ ನಿವಾಸಿಗಳು ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.

ಆರೋಪಿಗಳನ್ನು ವಶಕ್ಕೆ ಪಡೆದು, ತನಿಖೆ ನಡೆಸಲಾಗುತ್ತಿದೆ ಎಂದು ಎಸ್ಪಿ ಹರಿರಾಂ ಶಂಕರ್‌ ತಿಳಿಸಿದ್ದಾರೆ. ತಿಳಿಸಿದ್ದಾರೆ.