ಮನೆ ರಾಜಕೀಯ ಚಾಮುಂಡೇಶ್ವರಿಯಿಂದ ಜಿಟಿಡಿಗೆ, ಹುಣಸೂರು ಕ್ಷೇತ್ರದಿಂದ ಜಿ.ಡಿ.ಹರೀಶ್ ಗೌಡರಿಗೆ ಟಿಕೆಟ್ ಖಚಿತ

ಚಾಮುಂಡೇಶ್ವರಿಯಿಂದ ಜಿಟಿಡಿಗೆ, ಹುಣಸೂರು ಕ್ಷೇತ್ರದಿಂದ ಜಿ.ಡಿ.ಹರೀಶ್ ಗೌಡರಿಗೆ ಟಿಕೆಟ್ ಖಚಿತ

0

ಮೈಸೂರು(Mysuru): ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಶಾಸಕ ಜಿ.ಟಿ.ದೇವೇಗೌಡ ಅವರಿಗೆ  ಚಾಮುಂಡೇಶ್ವರಿ ಕ್ಷೇತ್ರದಿಂದ ಹಾಗೂ ಅವರ ಪುತ್ರ ಜಿ.ಡಿ.ಹರೀಶ್ ಗೌಡರಿಗೆ ಹುಣಸೂರು ‌ಕ್ಷೇತ್ರದಿಂದ ಜೆಡಿಎಸ್ ಟಿಕೆಟ್ ಖಚಿತವಾಗಿದೆ.

ಅಲ್ಲದೇ ಹಾಲಿ ಶಾಸಕರಾದ ಸಾ.ರಾ.ಮಹೇಶ್ (ಕೆ.ಆರ್.ನಗರ), ಕೆ.ಮಹದೇವ್ (ಪಿರಿಯಾಪಟ್ಟಣ) ಅವರಿಗೂ ಟಿಕೆಟ್ ಖಚಿತವಾಗಿದೆ ಎಂದು ತಿಳಿದುಬಂದಿದೆ.

ಮೂರು ವರ್ಷಗಳಿಂದಲೂ ಪಕ್ಷದಿಂದ ಅಂತರ ಕಾಯ್ದುಕೊಂಡಿದ್ದ ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡ ಅವರ ಮನವೊಲಿಸುವಲ್ಲಿ ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ.ದೇವೇಗೌಡ ಯಶಸ್ವಿಯಾಗಿದ್ದಾರೆ.

ಮೈಸೂರಿನ ವಿ.ವಿ.ಮೊಹಲ್ಲಾದಲ್ಲಿರುವ ಜಿಟಿಡಿ ನಿವಾಸಕ್ಕೆ ಗುರುವಾರ ಬಂದು ಭೋಜನ ಸ್ವೀಕರಿಸಿ ಮುನಿಸು ಮರೆಯುವಂತೆ ದೇವೇಗೌಡರು ಮಾಡಿದ್ದಾರೆ. ನಾನು ಜೆಡಿಎಸ್ ಬಿಡುವುದಿಲ್ಲ, ಇಲ್ಲೇ ಇರುತ್ತೇನೆ ಎಂದು ಘೋಷಿಸುವ ಮೂಲಕ ಜಿಟಿಡಿ ಹಲವು ದಿನಗಳ ಉಹಾಪೋಹಗಳಿಗೆ ತೆರೆ ಎಳೆದಿದ್ದಾರೆ.