ಮನೆ ಅಪರಾಧ ಸೂಚನಾ ಫಲಕಕ್ಕೆ ಬೈಕ್ ಡಿಕ್ಕಿ: ಪಾನಮತ್ತರಾಗಿದ್ದ ಇಬ್ಬರು ಯುವಕರು ಸಾವು

ಸೂಚನಾ ಫಲಕಕ್ಕೆ ಬೈಕ್ ಡಿಕ್ಕಿ: ಪಾನಮತ್ತರಾಗಿದ್ದ ಇಬ್ಬರು ಯುವಕರು ಸಾವು

0

ಬೆಂಗಳೂರು(Bengaluru): ಪಾನಮತ್ತರಾಗಿ ಬೈಕ್ ಚಲಾಯಿಸುತ್ತಿದ್ದ ಇಬ್ಬರು ಯುವಕರು ರಸ್ತೆಯ ಸೂಚನಾ ಫಲಕಕ್ಕೆ ಡಿಕ್ಕಿ ಹೊಡೆದಿರುವ ಘಟನೆ ರಾಜಾಜಿನಗರ ಸಂಚಾರಿ ಠಾಣಾ ವ್ಯಾಪ್ತಿಯ ಲಗ್ಗೆರೆ ಮೇಲ್ಸೇತುವೆ ಬಳಿ ಭಾನುವಾರ ರಾತ್ರಿ ನಡೆದಿದೆ.

ಅಪಘಾತದಲ್ಲಿ  ಇಬ್ಬರು ಯುವಕರು ಸಾವನ್ನಪ್ಪಿದ್ದು, ಮೃತರನ್ನು ದೇವರಾಜು(22) ಹಾಗೂ ಜಗದೀಶ್(22) ಎಂದು ಗುರುತಿಸಲಾಗಿದೆ.

ಕುಡಿದು ಬೈಕ್​ನಲ್ಲಿ ಸಾಗುತ್ತಿದ್ದ ಇಬ್ಬರು ರಾತ್ರಿ 11:45ರ ಸುಮಾರಿಗೆ ಲಗ್ಗೆರೆ ಮೇಲ್ಸೇತುವೆಯ ಬಳಿ ರಸ್ತೆ ಕಾಮಗಾರಿಯ ಕುರಿತು ಅಳವಡಿಸಲಾಗಿದ್ದ ಸೂಚನಾ ಫಲಕಕ್ಕೆ ಅತಿವೇಗವಾಗಿ ಬಂದು ಗುದ್ದಿದ್ದಾರೆ. ಪರಿಣಾಮ ಜಗದೀಶ್ ಸ್ಥಳದಲ್ಲೇ ಸಾವನ್ನಪ್ಪಿದರೆ,  ತೀವ್ರವಾಗಿ ಗಾಯಗೊಂಡ ದೇವರಾಜು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ರಾಜಾಜಿನಗರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.