ಮನೆ ಸುದ್ದಿ ಜಾಲ ಕೆಎಸ್’ಆರ್’ಟಿಸಿ: ಇನ್ನು ಮುಂದೆ ಸಾಕು ಪ್ರಾಣಿಗಳಿಗೆ ಅರ್ಧ ಟಿಕೆಟ್

ಕೆಎಸ್’ಆರ್’ಟಿಸಿ: ಇನ್ನು ಮುಂದೆ ಸಾಕು ಪ್ರಾಣಿಗಳಿಗೆ ಅರ್ಧ ಟಿಕೆಟ್

0

ಬೆಂಗಳೂರು(Bengaluru): ಕೆ.ಎಸ್.ಆರ್.ಟಿ.ಸಿ ಬಸ್’ನಲ್ಲಿ ಸಾಕು ಪ್ರಾಣಿಗಳಿಗೆ ವಿಧಿಸಲಾಗುತ್ತಿದ್ದ ಟಿಕೆಟ್ ದರವನ್ನು ಕಡಿತಗೊಳಿಸಿ ಪರಿಷ್ಕೃತ ಸುತ್ತೋಲೆಯನ್ನು ಹೊರಡಿಸಲಾಗಿದೆ.

ಈ ಹಿಂದೆ ಸಾಕು ಪ್ರಾಣಿಯು ಮರಿಯಾಗಿದ್ದರೂ ಕೂಡ ಫುಲ್ ಟಿಕೆಟ್ ವಿಧಿಸಲಾಗುತ್ತಿತ್ತು. ಆದರೆ ಪರಿಷ್ಕೃತ ಸುತ್ತೋಲೆ ಪ್ರಕಾರ  ಬಸ್​​ನಲ್ಲಿ ಕೊಂಡೊಯ್ಯುವ ಎಲ್ಲ ಸಾಕು ಪ್ರಾಣಿಗೂ ತಲಾ ಅರ್ಧ ಟಿಕೆಟ್ ದರ ವಿಧಿಸಲಾಗುತ್ತದೆ.

ನಾನ್‌ ಎಸಿ ಬಸ್​​ಗಳಲ್ಲಿ ಸಾಕು ಪ್ರಾಣಿ ಜೊತೆ ಪ್ರಯಾಣಿಸಲು ಅನುಮತಿ ನೀಡಲಾಗಿದೆ. ಕರ್ನಾಟಕ ವೈಭವ, ರಾಜಹಂಸ, ನಾನ್ ಎಸಿ ಸ್ಲೀಪರ್ ಮತ್ತು ಎಸಿ ಬಸ್​​ಗಳಲ್ಲಿ ಕೊಂಡೊಯ್ಯುವ ಹಾಗಿಲ್ಲ ಎಂದು ಸುತ್ತೋಲೆಯಲ್ಲಿ ಸ್ಪಷ್ಟಪಡಿಸಲಾಗಿದೆ.

ನಿಯಮದ ಪ್ರಕಾರ, ಕೆಎಸ್​ಆರ್​​ಟಿಸಿ ಬಸ್​​ನಲ್ಲಿ ಪ್ರಯಾಣಿಕರು ತಮ್ಮ ಸಾಕು ಪ್ರಾಣಿಗಳಾದ ಮೊಲ, ಶ್ವಾನ, ಬೆಕ್ಕು, ಪಕ್ಷಿಗಳನ್ನು ಕೊಂಡೊಯ್ಯಬಹುದು. ಈ ಮುಂಚೆ ಫುಲ್ ಟಿಕೆಟ್ ದರ ವಿಧಿಸಲಾಗುತ್ತಿತ್ತು. ಇದಕ್ಕೆ ಪ್ರಯಾಣಿಕರಿಂದ ಟೀಕೆ ವ್ಯಕ್ತವಾಗಿದ್ದು ಟಿಕೆಟ್ ದರ ಕಡಿತಗೊಳಿಸಲು ಸಂಸ್ಥೆ ನಿರ್ಧರಿಸಿತ್ತು.

ಪರಿಷ್ಕೃತ ಸುತ್ತೋಲೆಯಲ್ಲಿ 30 ಕೆ.ಜಿವರೆಗಿನ ಲಗೇಜ್ ಅ​ನ್ನು ಬಸ್​​ನಲ್ಲಿ ಸಾಗಿಸಲು ಅವಕಾಶವಿದೆ. 30 ಕೆ.ಜಿವರೆಗಿನ ತೆಂಗಿನ ಕಾಯಿ, ಹೂ, ದಿನಸಿ ಸಾಮಗ್ರಿ, ತರಕಾರಿಗಳನ್ನು ಕೊಂಡೊಯ್ಯಬಹುದಾಗಿದೆ.