ಗ್ರಂಥಾಲಯ ಕಂ ಸಹಾಯಕ ಹುದ್ದೆಗೆ ಅರ್ಜಿ….
ಚಿಕ್ಕಬಳ್ಳಾಪುರ ಜಿಲ್ಲೆಯ ಆರು ತಾಲೂಕುಗಳಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹುದ್ದೆ…
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಿಂದ ಕೋ ಆರ್ಡಿನೇಟರ್ ಹುದ್ದೆಗಳು
ಹೆಚ್ಎಎಲ್ ಯಲ್ಲಿ ಅಪ್ರೆಂಟಿಸ್ ಹುದ್ದೆ
ಸಿಬ್ಬಂದಿ ನೇಮಕಾತಿ ಆಯೋಗ ಎಸ್ ಎಸ್ ಸಿ ಇಂದ 39,481 ಹುದ್ದೆಗಳ ನೇಮಕಾತಿ
ಚಿಕ್ಕಬಳ್ಳಾಪುರ ಗ್ರಾಮ ಪಂಚಾಯಿತಿಯಲ್ಲಿ ಗ್ರಂಥ ಪಾಲಕರು ಹಾಗೂ ಮೇಲ್ವಿಚಾರಕರ ಹುದ್ದೆಗಳು
ಮಂಗಳೂರಿನ ಸುರತ್ಕಲ್ ನಲ್ಲಿರುವ ಎನ್ ಐ ಟಿ ಕೆ ಯಲ್ಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ..
ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಫೆಲೋಶಿಪ್ ಹುದ್ದೆಗಳ ಭರ್ತಿ..
ರಾಮನಗರ ಜಿಲ್ಲೆ ವ್ಯಾಪ್ತಿಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹುದ್ದೆಗಳು..
Important: No API Key Entered.
Many features are not available without adding an API Key. Please go to the YouTube Feed settings page to add an API key after following these instructions.
ಬೆಂಗಳೂರು: ಓಟ್ ಕಳ್ಳತನ ನೋಟು ಪ್ರಿಂಟ್ ಮಾಡುವಷ್ಟೇ ದೊಡ್ಡ ಅಪರಾಧ. ಇಂತಹ ಕೆಲಸ ಮಾಡಿರುವ ಕಿಂಗ್ ಪಿನ್’ಗಳ ವಿರುದ್ಧ ಕ್ರಮ ಆಗಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಒತ್ತಾಯಿಸಿದ್ದಾರೆ.
ಶನಿವಾರ ಬೆಂಗಳೂರಿನಲ್ಲಿ ಮಾತನಾಡಿದ ಅವರು, ಅಕ್ರಮಕ್ಕೆ ಸಂಬಂಧಿಸಿದಂತೆ ನಮ್ಮ ಮನವಿಯನ್ನು ಚುನಾವಣಾ ಆಯೋಗ ಅಂಗೀಕರಿಸಿದೆ. ಅದರ ಆಧಾರದ ಮೇಲೆ ಮೂವರು ಅಧಿಕಾರಿಗಳನ್ನು ಅಮಾನತು ಮಾಡಿದೆ. ಆದರೆ ಈ ಅಧಿಕಾರಿಗಳು ಸಿಎಂ ಮತ್ತು ಶಾಸಕರು ಹಾಗು ಸಚಿವರ ಸೂಚನೆಯಂತೆ ಕೆಲಸ ಮಾಡಿದ್ದಾರೆ. ಇದರ ಕಿಂಗ್ ಪಿನ್ ಮೇಲೆ ಕ್ರಮ ಆಗಬೇಕು ಎಂದರು.
ಇದು ಜನರಿಗೆ ಮಾಡಿದ ಮೋಸ. ಜನ ಇದಕ್ಕೆ ಪಾಠ ಕಲಿಸಬೇಕು. ಬಿಎಲ್’ಓ ನೇಮಕ ಮಾಡುವ ಅಧಿಕಾರ ಯಾರಿಗೂ ಇಲ್ಲ. ಪಕ್ಷದಿಂದ ನೇಮಕ ಮಾಡಿದ್ರು ತಹಶಿಲ್ದಾರ್ ಅದಕ್ಕೆ ಸಹಿ ಹಾಕಬೇಕು ಎಂದರು.
ನಮ್ಮ ಅವಧಿಯಲ್ಲಿ ಅಕ್ರಮ ಆಗಿದ್ರೆ ಕ್ರಮ ಜರುಗಿಸಿ. ಆರ್ ಆರ್ ನಗರದಲ್ಲಿ ಗೌಡ ಅಂತ ಹೆಸರು ಇದ್ದರೆ ಕುಟುಂಬದಲ್ಲಿ ಎರಡು ವೋಟ್ ಮಾತ್ರ ಬಿಟ್ಟಿದ್ದಾರೆ. ಗೌಡ ಅಂತ ಇದ್ದರೆ ಡಿಲಿಟ್ ಮಾಡಿದ್ದಾರೆ. ದಲಿತ, ಹಿಂದುಳಿದ, ಮುಸ್ಲಿಂ ಸಮುದಾಯದ ಮತಗಳನ್ನ ಡಿಲಿಟ್ ಮಾಡಿದ್ದಾರೆ. ನಮ್ಮ ಕಾಲದಲ್ಲಿ ಮಾಡಿದ್ದಾರೆ ಎಂದು ಹೇಳಿದ್ದಾರೆ. ನಮ್ಮ ಕಾಲದಲ್ಲಿ ಆಗಿದ್ರೆ ಕೇಸ್ ಹಾಕಿ ಕ್ರಮ ಕೈಗೊಳ್ಳಿ. ನಾವು ನೇರವಾಗಿ ಇಳಿದು ಬಂದಿಲ್ಲವಲ್ಲ. ಈ ಪ್ರಕರಣದಲ್ಲಿ ಶಾಸಕರು, ಸಚಿವರು ಭಾಗಿಯಾಗಿದ್ದಾರೆ. ನನ್ನ ಮೇಲೆ ಮಾನನಷ್ಟ ಮೊಕದ್ದಮೆ ಹಾಕ್ತೀವಿ ಎಂದು ಹೇಳಿದ್ದಾರೆ . ಹಾಕಲಿ ನನಗೇನು ಭಯವಿಲ್ಲ ಎಂದು ಅಶ್ವಥ್ ನಾರಾಯಣಗೆ ತಿರುಗೇಟು ನೀಡಿದರು.
ಹಿರಿಯ ಅಧಿಕಾರಿಗಳು ನಮಗೆ ಮೇಲಿನಿಂದ ಆದೇಶ ಇತ್ತು ಮಾಡಿದ್ದೇವೆಂದು ಹೇಳಿದ್ದಾರೆ. ಇದು ನ್ಯಾಯಾಂಗ ತನಿಖೆ ಆಗಬೇಕು. ಡಿಲಿಟ್ ಮಾಡಲು ಅರ್ಜಿ ಕೊಡಬೇಕು. ಮನೆ ಅಕ್ಕಪಕ್ಕ ಮಹಜರ್ ಮಾಡಬೇಕು . ಬಿಎಲ್’ಓ ಗಳನ್ನು ನೇಮಕ ಮಾಡಿದವರ ವಿರುದ್ಧ ಕ್ರಮ ಆಗಬೇಕು ಎಂದರು.
ಇಡೀ 28 ಕ್ಷೇತ್ರಗಳಲ್ಲಿ ಮತ್ತೆ ಮತದಾರರ ಪಟ್ಟಿ ಪರಿಷ್ಕರಣೆ ಮಾಡಬೇಕು. ಇವರು ಶಾಸಕರ ಕಚೇರಿಯಲ್ಲಿ ನಡೆದ ಪರಿಷ್ಕರಣೆ ಬೇಡ. ದುಡ್ಡು ಎಲ್ಲಿಂದ ಹೋಯಿತು? ಯಾರು ಕೊಟ್ರು ಅನ್ನೋದು ತನಿಖೆ ಆಗಲಿ ಎಂದು ಒತ್ತಾಯಿಸಿದರು.
ಚಿಲುಮೆ ನನಗೆ ಪರಿಚಯ ಇಲ್ಲ ಎಂದು ಮಂತ್ರಿ ಹೇಳಿದ್ರು . ಈಗ ದುರುಪಯೋಗ ಇಲ್ಲ ಎಂದಿದ್ದಾರೆ. ಸಿಎಂ ಗಮನಕ್ಕೆ ತರದೇ ಈ ಕೆಲಸ ಸಾಧ್ಯವಿಲ್ಲ. ಮಹಾದೇವಪುರದಲ್ಕಿ ಶಾಸಕರ ಸೂಚನೆಯಂತೆ ಕೆಲಸ ಮಾಡಿದ್ದೇವೆಂದು ಹೇಳಿದ್ದಾರೆ. ಈ ಬಗ್ಗೆ ನನ್ನ ಬಳಿ ದಾಖಲೆ ಇದೆ ಎಂದರು.