ಮನೆ ಸುದ್ದಿ ಜಾಲ ಸಿಎಂ ಬೊಮ್ಮಾಯಿ ಮೈಸೂರು ಜಿಲ್ಲಾ ಪ್ರವಾಸ: ಸಂಚಾರ ಮಾರ್ಗ ಬದಲಾವಣೆ

ಸಿಎಂ ಬೊಮ್ಮಾಯಿ ಮೈಸೂರು ಜಿಲ್ಲಾ ಪ್ರವಾಸ: ಸಂಚಾರ ಮಾರ್ಗ ಬದಲಾವಣೆ

0

ಮೈಸೂರು(Mysuru): ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು (ಸೋಮವಾರ) ಮೈಸೂರು ಜಿಲ್ಲಾ ಪ್ರವಾಸ ಕೈಗೊಂಡಿರುವುದರಿಂದ ಸಾರ್ವಜನಿಕರ ಸುಗಮ ಸಂಚಾರದ ಸಲುವಾಗಿ ನಂಜನಗೂಡು ಪಟ್ಟಣದ ಮಾರ್ಗವಾಗಿ ಸಂಚರಿಸುವ ಭಾರಿ ವಾಹನಗಳ ಸಂಚಾರ ಮಾರ್ಗವನ್ನು ಬೆಳಗ್ಗೆ ೮ ಗಂಟೆಯಿಂದ ಮಧ್ಯಾಹ್ನ ೨ ಗಂಟೆಯವರೆಗೆ ಬದಲಾವಣೆ ಮಾಡಲಾಗಿದೆ.

ಮುಖ್ಯಮಂತ್ರಿಗಳು ಇಂದು ನಂಜನಗೂಡು ಪಟ್ಟಣಕ್ಕೆ ಆಗಮಿಸಿ ಶ್ರೀಕಂಠೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ಜಿಲ್ಲಾಡಳಿತ ಮತ್ತು ಧಾರ್ಮಿಕ ದತ್ತಿ ಇಲಾಖೆ ವತಿಯಿಂದ ಆಯೋಜಿಸಿರುವ ಶ್ರೀಕಂಠೇಶ್ವರ ದೇವಸ್ಥಾನದ ವಿವಿಧ ಅಭಿವೃದ್ದಿ ಕಾಮಗಾರಿಗಳ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ.

ಆದ್ದರಿಂದ ಚಾಮರಾಜನಗರದ ಕಡೆಯಿಂದ ಮೈಸೂರಿಗೆ ಹೋಗುವ ಬಸ್ಸು, ಲಾರಿ, ಹಾಗೂ ಇತರೆ ಭಾರಿ ವಾಹನಗಳು ಗೋಳೂರು ಕ್ರಾಸ್-ಟಿ ನರಸೀಪುರ ರಸ್ತೆ-ಸುತ್ತೂರು ಹೊಸಕೋಟೆ ಮೂಲಕ ಮೈಸೂರಿಗೆ ಹೋಗಲು ಸೂಚಿಸಲಾಗಿದೆ.

ಮೈಸೂರಿನಿಂದ ಚಾಮರಾಜನಗರಕ್ಕೆ ತೆರಳುವ ಬಸ್ಸು, ಲಾರಿ, ಹಾಗೂ ಇತರೆ ಭಾರಿ ವಾಹನಗಳು ಟಿ.ನರಸೀಪುರ-ಮೂಗೂರು-ಸಂತೆಮರಳ್ಳಿ ಮಾರ್ಗವಾಗಿ ಚಾಮರಾಜನಗರಕ್ಕೆ ಸಂಚರಿಸಬೇಕು.

ಇನ್ನುಳಿದಂತೆ ಬೈಕ್ ಕಾರಿನಂತಹ ಹಾಗೂ ಇತರೆ ಲಘು ವಾಹನಗಳು ದಿನನಿತ್ಯದ ಮಾರ್ಗದಲ್ಲೇ ಸಂಚರಿಸಬಹುದಾಗಿರುತ್ತದೆ.