ಮನೆ ರಾಷ್ಟ್ರೀಯ ಸೀಗಡಿ ಕಂಟೈನರ್‌’ಗೆ ಮರಳು ಲಾರಿ ಡಿಕ್ಕಿ: ನಾಲ್ವರು ಸಜೀವ ದಹನ

ಸೀಗಡಿ ಕಂಟೈನರ್‌’ಗೆ ಮರಳು ಲಾರಿ ಡಿಕ್ಕಿ: ನಾಲ್ವರು ಸಜೀವ ದಹನ

0

ಆಂಧ್ರಪ್ರದೇಶ(Andrapradesh): ಸೀಗಡಿ ಕಂಟೈನರ್‌’ಗೆ ಮರಳು ಲಾರಿಯೊಂದು ಡಿಕ್ಕಿ ಹೊಡೆದಿದೆ. ಪರಿಣಾಮ ಎರಡು ವಾಹನಗಳು ಬೆಂಕಿಗೆ ಆಹುತಿಯಾಗಿದ್ದು, ನಾಲ್ವರು ಸಜೀವ ದಹನವಾಗಿರುವ ಘಟನೆ ಜಿಲ್ಲೆಯ ಪ್ರತ್ತಿಪಾಡು ತಾಲೂಕಿನ ಧರ್ಮಾವರಂ ರಾಷ್ಟ್ರೀಯ ಹೆದ್ದಾರಿಯಲ್ಲಿ ಗುರುವಾರ ಮಧ್ಯರಾತ್ರಿ ನಡೆದಿದೆ.

ಪೊಲೀಸರ ಮಾಹಿತಿ ಪ್ರಕಾರ, ವಿಶಾಖ ಕಡೆಗೆ ಹೋಗುತ್ತಿದ್ದ ಮರಳು ಲಾರಿ ರಸ್ತೆಯ ಡಿವೈಡರ್​ ಡಿಕ್ಕಿ ಹೊಡೆದು ಎದುರಿನಿಂದ ಬರುತ್ತಿದ್ದ ಕಂಟೇನರ್‌ಗೆ ಬಲವಾಗಿ ಡಿಕ್ಕಿ ಹೊಡೆದಿದೆ. ಕಂಟೈನರ್​ನ ಡೀಸೆಲ್ ಟ್ಯಾಂಕ್’​ಗೆ ಲಾರಿ ನೇರವಾಗಿ ಡಿಕ್ಕಿ ಹೊಡೆದಿದ್ದರಿಂದ ಬೆಂಕಿ ಹೊತ್ತಿಕೊಂಡು ಈ ಅಪಘಾತ ಸಂಭವಿಸಿದೆ.

ಮೃತರು ಉತ್ತರ ಪ್ರದೇಶದ ಊಂಚಿಡ್ ಗ್ರಾಮದ ಕಂಟೈನರ್ ಚಾಲಕ ವಿನೋದ ಕುಮಾರ್ ರಾಧೇಶ್ಯಾಮ್ ಯಾದವ್ (27), ಭೀಮಾವರಂ ಜಿಲ್ಲೆಯ ಯನಮದುರ್ರು ಗ್ರಾಮದ ಮೇಲ್ವಿಚಾರಕ ಕಾಳಿ ಪೆದ್ದಿರಾಜು (45), ಮರಳು ಲಾರಿ ಚಾಲಕ ಕೃಷ್ಣಾ ಜಿಲ್ಲೆಯ ಕೋಡೂರು ತಾಲೂಕಿನ ಪಡವರಿಪಾಲೆಂ ಗ್ರಾಮದ ಜನ್ನು ಶ್ರೀನು (45) ಎಂದು ಗುರುತಿಸಲಾಗಿದೆ.

ಈ ಮೂವರು ಸೇರಿದಂತೆ ಮತ್ತೊಬ್ಬರು ಅದೇ ವಾಹನದಲ್ಲಿ ಸಜೀವ ದಹನವಾಗಿದ್ದು, ಗುರುತು ಪತ್ತೆಯಾಗಿಲ್ಲ.

ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಮತ್ತು ಅಗ್ನಿಶಾಮಕ ದಳದವರು ರಾತ್ರಿಯಿಡೀ ಬೆಂಕಿ ನಿಯಂತ್ರಿಸಲು ಶ್ರಮಿಸಿದರು. ಈ ಘಟನೆ ಕುರಿತು ಪ್ರತ್ತಿಪಾಡು ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.