ಮನೆ ರಾಜಕೀಯ ಕಾಂಗ್ರೆಸ್ ಎಂದಿಗೂ ಹಿಂದುಗಳ ಹಿತ ಕಾಯುವ ಕೆಲಸ ಮಾಡಿಲ್ಲ: ಬಸನಗೌಡ ಪಾಟೀಲ ಯತ್ನಾಳ

ಕಾಂಗ್ರೆಸ್ ಎಂದಿಗೂ ಹಿಂದುಗಳ ಹಿತ ಕಾಯುವ ಕೆಲಸ ಮಾಡಿಲ್ಲ: ಬಸನಗೌಡ ಪಾಟೀಲ ಯತ್ನಾಳ

0

ಕಲಬುರಗಿ(Kalburgi): ಕಾಂಗ್ರೆಸ್ ಎಂದಿಗೂ ಹಿಂದುಗಳ ಹಿತ ಕಾಯುವ ಕೆಲಸ ಮಾಡಿಲ್ಲ. ಕಾಂಗ್ರೆಸ್ ಪಕ್ಷವು ಸದಾ ಮುಸ್ಲಿಮರ ‌ಪರವಾದ ನಿಲುವುಗಳನ್ನು ತೆಗೆದುಕೊಳ್ಳುತ್ತಿದೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಟೀಕಿಸಿದರು.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದುಗಳಿಗೆ ಸಮಸ್ಯೆಯಾದಾಗ ಕಾಂಗ್ರೆಸ್ ಒಮ್ಮೆಯೂ ಧ್ವನಿ ಎತ್ತಿಲ್ಲ. ಹೀಗಾಗಿ ಅದು ಪಾಕಿಸ್ತಾನದ ಪಕ್ಷವಾಗಿವೆ ಎಂದು ಆಪಾದಿಸಿದರು.

ಕಾಂಗ್ರೆಸ್ ಅವರಿಗೆ ಅಭದ್ರತೆ ಶುರುವಾಗಿದ್ದರಿಂದಲೇ ಎಲ್ಲರೂ ಬೀದಿಗೆ ಬಂದಿದ್ದಾರೆ. ರಾಹುಲ್ ಗಾಂಧಿ ಗಡ್ಡ ಬಿಟ್ಟುಕೊಂಡು ಭಾರತ್ ಜೋಡೊ ಯಾತ್ರೆ ನಡೆಸುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

ಬಿ.ಎಸ್.ಯಡಿಯೂರಪ್ಪ ಅವರನ್ನು ಪಕ್ಷದಲ್ಲಿ ಮೂಲೆಗುಂಪು ಮಾಡಿಲ್ಲ. ಅವರನ್ನು ಪಕ್ಷದ ರಾಷ್ಟ್ರೀಯ ಸಂಸದೀಯ ಮಂಡಳಿ ಸದಸ್ಯರನ್ನಾಗಿ ಮೋದಿ ಅವರು ನೇಮಕ ಮಾಡಿದ್ದಾರೆ. ಈಗಲಾದರೂ ಯಡಿಯೂರಪ್ಪ ಅವರು ದೆಹಲಿ, ಗುಜರಾತ್, ಕಾಶ್ಮೀರದ ಪಕ್ಷದ ವಿದ್ಯಮಾನಗಳ ಬಗ್ಗೆ ಯೋಚಿಸಬೇಕು. ನಾನು ಮೊದಲು ಜಿಲ್ಲಾ ಪಂಚಾಯಿತಿ ಸದಸ್ಯನಿದ್ದೆ. ಈಗ ಶಾಸಕನಾಗಿದ್ದೇನೆ. ನಾನು ಶಾಸಕನ ಜವಾಬ್ದಾರಿ ನಿರ್ವಹಿಸಬೇಕೇ ಹೊರತು ಜಿ.ಪಂ.‌ ಸದಸ್ಯನಂತೆ ಯೋಚಿಸಬಾರದು. ಹಾಗೆಯೇ ಯಡಿಯೂರಪ್ಪ ಅವರು ರಾಷ್ಟ್ರಮಟ್ಟದ ಸಂಗತಿಗಳತ್ತ ಗಮನ ಹರಿಸಬೇಕು ಎಂದರು.