ಮನೆ ರಾಜಕೀಯ ಮಂಡ್ಯ ಬಿಡುವ ಪ್ರಶ್ನೆಯೇ ಇಲ್ಲ: ಸುಮಲತಾ ಅಂಬರೀಶ್ ಸ್ಪಷ್ಟನೆ

ಮಂಡ್ಯ ಬಿಡುವ ಪ್ರಶ್ನೆಯೇ ಇಲ್ಲ: ಸುಮಲತಾ ಅಂಬರೀಶ್ ಸ್ಪಷ್ಟನೆ

0

ಮಂಡ್ಯ(Mandya): ನನಗೆ ಮಂಡ್ಯದ ರಾಜಕೀಯದಲ್ಲಿ ಅಸ್ತಿತ್ವವಿದೆ. ರಾಜಕೀಯ ಮಾಡುವುದಿದ್ದರೆ ಮಂಡ್ಯದಲ್ಲಿಯೇ ಮಾಡ್ತೀನಿ, ಮಂಡ್ಯ ಬಿಡುವ ಪ್ರಶ್ನೆಯೇ ಇಲ್ಲ ಎಂದು ಸುಮಲತಾ ಅಂಬರೀಶ್ ಸ್ಪಷ್ಟವಾಗಿ ಹೇಳಿದ್ದಾರೆ.

ಸುಮಲತಾ ಅಂಬರೀಶ್​ ಅವರು 2024 ರ ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರಿನಿಂದ ಸ್ಪರ್ಧಿಸುತ್ತಾರೆ ಎಂಬ ನಿಖಿಲ್ ಕುಮಾರಸ್ವಾಮಿ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಅವರು, ನಿಖಿಲ್ ಹೇಳಿಕೆ ಕೇಳಿ ನನಗೆ ನಗು ಬಂತು. ಈಗ ರಾಮನಗರದಿಂದ ಸ್ಪರ್ಧೆ ಮಾಡಲು ರೆಡಿಯಾಗ್ತಿರೋದು ಯಾರು ಅಂತಾ ಗೊತ್ತಿದೆ. ಈ ಹಿಂದೆ ಬೆಂಗಳೂರಿಂದ ಆಫರ್ ಇತ್ತು. ಅದನ್ನು ಆಗಲೇ ರಿಜೆಕ್ಟ್ ಮಾಡಿದ್ದೆ ಎಂದು ಹೇಳಿದರು.

ಜೆಡಿಎಸ್ ನಾಯಕರು ಹೇಳುವುದೊಂದು, ಮಾಡುವುದೊಂದು, ನಡೆದುಕೊಳ್ಳುವುದೇ ಒಂದು. ಯಾರೋ ಒಬ್ಬರು ಶಾಸಕರು ನಿಖಿಲ್ 2.5 ಲಕ್ಷ ಮತಗಳ ಅಂತರದಿಂದ ಗೆಲ್ಲದಿದ್ರೆ ರಾಜಕೀಯ ನಿವೃತ್ತಿ ಪಡೆದುಕೊಳ್ಳುತ್ತೇನೆ ಎಂದಿದ್ದರು. ಈಗ ಅವರೇನು ಮಾಡಿದ್ದಾರೆ.? ಈ ತರದ ಮಾತೆಲ್ಲ ಸುಮ್ಮನೆ. ಹೀಗೆ ಮಾತಾಡಿ ಮಾತಾಡಿ ಅವರ ಮಾತನ್ನು ಜನರು ನಂಬುತ್ತಿಲ್ಲ ಎಂದು ತಿರುಗೇಟು ಕೊಟ್ಟರು.