ಮನೆ ರಾಷ್ಟ್ರೀಯ ಗಣರಾಜ್ಯೋತ್ಸವ ಪರೇಡ್’ನ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಬಳ್ಳಾರಿಯ ವಿದ್ಯಾರ್ಥಿನಿ ಆಯ್ಕೆ

ಗಣರಾಜ್ಯೋತ್ಸವ ಪರೇಡ್’ನ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಬಳ್ಳಾರಿಯ ವಿದ್ಯಾರ್ಥಿನಿ ಆಯ್ಕೆ

0

ಬಳ್ಳಾರಿ: 73ನೇ ಗಣರಾಜ್ಯೋತ್ಸವದ ಅಂಗವಾಗಿ ದೆಹಲಿಯ ರಾಜ್‍ಪತ್‍ನಲ್ಲಿ ನಡೆಯಲಿರುವ ಪರೇಡ್‍’ನ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಬಳ್ಳಾರಿಯ ಕೇಂದ್ರೀಯ ವಿದ್ಯಾಲಯದ ವಿದ್ಯಾರ್ಥಿನಿ ಅವನಿ ಗಂಗಾವತಿ ಆಯ್ಕೆಯಾಗಿದ್ದಾಳೆ.

ಬಳ್ಳಾರಿಯ ಎನ್’ಸಿಸಿ ಜೂನಿಯರ್ ವಿಂಗ್ ವಿದ್ಯಾರ್ಥಿನಿಯಾಗಿರುವ ಅವನಿ ಕರ್ನಾಟಕ ಮತ್ತು ಗೋವಾ ಎನ್’ಸಿಸಿ ವಿದ್ಯಾರ್ಥಿಗಳ ತಂಡ ಪ್ರತಿನಿಧಿಸಲಿದ್ದಾಳೆ.

ಬಳ್ಳಾರಿಯ ಕೇಂದ್ರೀಯ ವಿದ್ಯಾಲಯದಲ್ಲಿ 9ನೇ ತರಗತಿಯಲ್ಲಿ ಓದುತ್ತಿರುವ ಕುಮಾರಿ ಅವನಿ ಗಂಗಾವತಿ ಎನ್’ಸಿಸಿ ಜೊತೆಗೆ, ಭರತನಾಟ್ಯ ಕಲಾವಿದೆಯೂ ಆಗಿದ್ದಾರೆ. ಹಲವು ಕಡೆ ಭರತ ನಾಟ್ಯ ಪ್ರದರ್ಶನ ನೀಡಿ ಪ್ರಶಸ್ತಿ ಪಡೆದಿದ್ದಾರೆ. ಜೊತೆಗೆ ಶಾಲೆಯಲ್ಲಿ ಶಿಕ್ಷಕರ ಅಚ್ಚು ಮೆಚ್ಚಿನ ವಿದ್ಯಾರ್ಥಿನಿಯಾಗಿದ್ದಾಳೆ.

ದೆಹಲಿಯಲ್ಲಿ ನಡೆಯುವ 73ನೇ ಗಣರಾಜ್ಯೋತ್ಸವಕ್ಕೆ ಕಲ್ಚರಲ್ ಇವೆಂಟ್ಸ್ ಗಾಗಿ ಬಳ್ಳಾರಿ ಎನ್’ಸಿಸಿ ಗ್ರೂಪ್’ನಿಂದ (ಅಂದರೆ ಬಳ್ಳಾರಿ, ಕಲಬುರ್ಗಿ, ಬಿಜಾಪುರ, ಗದಗ, ಬಾಗಲಕೋಟೆ, ದಾವಣಗೆರೆ, ಬೀದರ್, ರಾಯಚೂರು ಸೇರಿಸಿ ರೂಪಿಸಿರುವ ತಂಡ) ಆಯ್ಕೆಯಾದ (ಜ್ಯೂನಿಯರ್ ವಿಂಗ್) ಏಕೈಕ ವಿದ್ಯಾರ್ಥಿನಿಯಾಗಿದ್ದಾಳೆ.