ಮನೆ ಮನರಂಜನೆ  ಜನರ ಮನ ಗೆದ್ದ “ದೂರದರ್ಶನ”: ಮಾರ್ಚ್ 3 ರಂದು ಚಿತ್ರ ತೆರೆಗೆ

 ಜನರ ಮನ ಗೆದ್ದ “ದೂರದರ್ಶನ”: ಮಾರ್ಚ್ 3 ರಂದು ಚಿತ್ರ ತೆರೆಗೆ

0

ಪೃಥ್ವಿ ಅಂಬಾರ್, ಅಯಾನ ಜೋಡಿಯಾಗಿ ಅಭಿನಯಿಸಿರುವ, ಸುಕೇಶ್ ಶೆಟ್ಟಿ ಚೊಚ್ಚಲ ನಿರ್ದೇಶನದಲ್ಲಿ ಮೂಡಿ ಬಂದಿರುವ “ದೂರದರ್ಶನ’ ಸಿನಿಮಾ ಇದೇ ಮಾರ್ಚ್ 3ರಂದು ತೆರೆಗೆ ಬರುತ್ತಿದೆ.

ಸದ್ಯ “ದೂರದರ್ಶನ’ ಸಿನಿಮಾದ ಪ್ರಚಾರ ಕಾರ್ಯಗಳಲ್ಲಿ ನಿರತವಾಗಿರುವ ಚಿತ್ರತಂಡ, ಇತ್ತೀಚೆಗೆ ಸಿನಿಮಾದ ಮೊದಲ ಟ್ರೇಲರ್ ಅನ್ನು ಬಿಡುಗಡೆ ಮಾಡಿದೆ.

ಇದೇ ವೇಳೆ ಮಾತನಾಡಿದ ನಾಯಕ ನಟ ಪೃಥ್ವಿ ಅಂಬಾರ್, ಈ ಸಿನಿಮಾ ಒಂದು ಕಾದಂಬರಿ ಓದಿದ ಅನುಭವವನ್ನು ನೀಡುವಂತಿದೆ. 80-90ರ ದಶಕದ ಚಿತ್ರಣ, ಬಾಲ್ಯದ ತರಲೆ, ತುಂಟಾಟ ಎಲ್ಲವೂ ಸಿನಿಮಾದಲ್ಲಿದೆ. ಲವ್, ಕಾಮಿಡಿ, ಎಮೋಷನ್ಸ್ ಎಲ್ಲವನ್ನೂ ಈ ಸಿನಿಮಾದಲ್ಲಿ ಕಾಣಬಹುದು. ನಾನು ಈ ಸಿನಿಮಾದಲ್ಲಿ ಮನು ಎಂಬ ಪಾತ್ರ ಮಾಡಿದ್ದೇನೆ. ಎಲ್ಲರಿಗೂ ತುಂಬಾ ಹತ್ತಿರವಾಗುವಂಥ ಒಳ್ಳೆಯ ಕಂಟೆಂಟ್ ಸಿನಿಮಾ ಮಾಡಿದ್ದೇವೆ ಎಂಬ ಭರವಸೆ ವ್ಯಕ್ತಪಡಿಸಿದರು.

ಚಿತ್ರದ ಬಗ್ಗೆ ಮಾತನಾಡಿದ ನಾಯಕಿ ಅಯಾನ, ಈ ಸಿನಿಮಾದಲ್ಲಿ ಮೈತ್ರಿ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಸಿಂಪಲ್ ಆಗಿರುವಂಥ ಸ್ವಲ್ಪ ರೆಟ್ರೋ ಸ್ಟೈಲ್ನಲ್ಲಿ ಕಾಣುವಂಥ ಹುಡುಗಿ ಪಾತ್ರ’ ಎಂದು ಪಾತ್ರ ಪರಿಚಯ ಮಾಡಿಕೊಟ್ಟರು.

ನಿರ್ದೇಶಕ ಸುಕೇಶ್ ಶೆಟ್ಟಿ ಮಾತನಾಡಿ, ಈ ಚಿತ್ರ ಒಂದಷ್ಟು ವಿಷಯಗಳಿಗೆ ಸ್ಪೆಷಲ್ ಎನಿಸಿಕೊಳ್ಳುತ್ತದೆ. ಮಾಮೂಲಿ ಶೈಲಿಯನ್ನು ಬಿಟ್ಟು ತುಂ¸ ಆಪ್ತವಾಗುವಂತೆ ಸಿನಿಮಾವನ್ನು ನರೇಟ್ ಮಾಡಲಾಗಿದೆ. ಎರಡು ಕಾಲು ಗಂಟೆ ಒಂದು ಊರೊಳಗೆ ಹೋಗಿ ಎಂಜಾಯ್ ಮಾಡಿದ ಅನುಭವವನ್ನು ಈ ಸಿನಿಮಾ ಪ್ರತಿಯೊಬ್ಬರಿಗೂ ನೀಡಲಿದೆ ಎಂದರು.

ನಿರ್ಮಾಪಕ ರಾಜೇಶ್ ಭಟ್, ಇಡೀ ಚಿತ್ರತಂಡದ ಸಹಕಾರದಿಂದ ಇಂಥದ್ದೊಂದು ಒಳ್ಳೆಯ ಸಿನಿಮಾ ಮಾಡೋದಕ್ಕೆ ಸಾಧ್ಯವಾಯಿತು. ಎರಡು-ಮೂರು ದಶಕಗಳ ಹಿಂದೆ ನಾವು ನೋಡಿದ ಚಿತ್ರಣ ಈ ಸಿನಿಮಾದಲ್ಲಿದೆ. ಇಂಥದ್ದೊಂದು ಸಿನಿಮಾ ಮಾಡಿರುವುದಕ್ಕೆ ಖುಷಿಯಿದೆ ಎಂದರು.

“ವಿ ಎಸ್ ಎಂಟರ್ಟೈನ್ಮೆಂಟ್’ ಬ್ಯಾನರ್ನಲ್ಲಿ ರಾಜೇಶ್ ಭಟ್ ನಿರ್ಮಿಸಿರುವ ಈ ಚಿತ್ರದಲ್ಲಿ ಪೃಥ್ವಿ ಅಂಬಾರ್, ಅಯಾನ ಅವರೊಂದಿಗೆ ಉಗ್ರಂ ಮಂಜು, ಸುಂದರ್, ಹರಿಣಿ, ದೀಪಕ್ ರೈ, ರಘು ರಮಣಕೊಪ್ಪ, ಹುಲಿ ಕಾರ್ತಿಕ್, ಸೂರಜ್ ಮಂಗಳೂರು, ಸೂರ್ಯ ಕುಂದಾಪುರ ಮೊದಲಾದವರು ಇತರ ಪ್ರಮುಖ ಪಾತ್ರ ಗಳಲ್ಲಿ ಅಭಿನಯಿಸಿದ್ದಾರೆ.

ಚಿತ್ರಕ್ಕೆ ಅರುಣ್ ಸುರೇಶ್ ಛಾಯಾಗ್ರಹಣ, ಪ್ರದೀಪ್ ಆರ್. ರಾವ್ ಸಂಕಲನವಿದೆ. ಚಿತ್ರಕ್ಕೆ ನಂದೀಶ್ ಟಿ. ಜಿ ಸಂಭಾಷಣೆ ಬರೆದಿದ್ದು, ವಾಸುಕಿ ವೈಭವ್ ಹಾಡುಗಳಿಗೆ ಸಂಗೀತ ಸಂಯೋಜಿಸಿದ್ದಾರೆ.