ಮನೆ ರಾಷ್ಟ್ರೀಯ ಸಿಎಂ ಮಗನ ಮೇಲೆ ಜೀವ ಬೆದರಿಕೆ ಆರೋಪ: ಸಂಜಯ್ ರಾವುತ್ ಮೇಲೆ ಎಫ್ಐಆರ್

ಸಿಎಂ ಮಗನ ಮೇಲೆ ಜೀವ ಬೆದರಿಕೆ ಆರೋಪ: ಸಂಜಯ್ ರಾವುತ್ ಮೇಲೆ ಎಫ್ಐಆರ್

0

ಮುಂಬೈ: ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂದೆ ಅವರ ಪುತ್ರ ಶ್ರೀಕಾಂತ್‌ ಶಿಂದೆ ಅವರ ವಿರುದ್ಧ ಜೀವ ಬೆದರಿಕೆ ಆರೋಪ ಮಾಡಿದ, ಶಿವಸೇನಾ (ಉದ್ಧವ್ ಬಾಳಾ ಸಾಹೇಬ್‌ ಠಾಕ್ರೆ ಬಣ) ಸಂಸದ ಸಂಜಯ್‌ ರಾವುತ್‌ ಮೇಲೆ ಥಾಣೆ ನಗರ ಪೊಲೀಸರು ಎಫ್‌’ಐಆರ್‌ ದಾಖಲಿಸಿದ್ದಾರೆ.

ಐಪಿಸಿಯ 153 (ಎ) (ಎರಡು ಗುಂಪುಗಳು ಅಥವಾ ಧರ್ಮಗಳ ನಡುವೆ ಅಸಾಮರಸ್ಯ ಮೂಡಿಸುವುದು), 500 (ಮಾನನಷ್ಟ) ಹಾಗೂ ಇನ್ನಿತರ ಕಲಂಗಳ ಅಡಿಯಲ್ಲಿ ಕಪುರ್‌ ಬಡ್ವಿ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

ಮಾಜಿ ಮೇಯರ್‌ ಮೀನಾಕ್ಷಿ ಶಿಂದೆ ಅವರು ನೀಡಿದ ದೂರಿನ ಅನ್ವಯ ಪ್ರಕರಣ ದಾಖಲಾಗಿದೆ.

ಲೋಕಸಭಾ ಸಂಸದ ಶ್ರೀಕಾಂತ್‌ ಶಿಂದೆ ಅವರು ನನ್ನನ್ನು ಕೊಲೆ ಮಾಡಲು ಥಾಣೆ ಮೂಲದ ಕ್ರಿಮಿನಲ್‌ ರಾಜಾ ಠಾಕೂರ್ ಅವರಿಗೆ ಸುಪಾರಿ ನೀಡಿದ್ದಾರೆ ಎಂದು ಸಂಜಯ್‌ ರಾವುತ್‌ ಆರೋಪಿಸಿದ್ದರು.