ಯಾವುದೇ ಒಂದು ವ್ಯಕ್ತಿಗಾಗಲೀ ಕೆಲವೊಂದು ವಿಷ್ಯದ ಬಗ್ಗೆ ಅಭದ್ರತೆ ಕಾಡುತ್ತಿರುತ್ತದೆ. ಮಹಿಳೆಯರಷ್ಟೇ ಅಲ್ಲ ಪುರುಷರೂ ಕೂಡಾ ಹಲವಾರು ವಿಷ್ಯಗಳಲ್ಲಿ ಅಭದ್ರತೆಗಳಿಗೆ ಒಳಗಾಗುತ್ತಾರೆ. ಪುರುಷರು ತಮ್ಮ ಜೀವನದಲ್ಲಿ ಹಲವಾರು ವಿಷಯಗಳ ಬಗ್ಗೆ ಸಾಕಷ್ಟು ಅಸುರಕ್ಷಿತರಾಗಿರುತ್ತಾರೆ. ಇದು ತೀವ್ರವಾದ ಸ್ವಾಭಿಮಾನ ಮತ್ತು ಆತ್ಮವಿಶ್ವಾಸದ ಸಮಸ್ಯೆಗಳಿಗೆ ಕಾರಣವಾಗಬಹುದು. ನಾವಿಲ್ಲಿ ಪುರುಷರು ಹೊಂದಿರುವ ಕೆಲವು ಸಾಮಾನ್ಯ ಅಭದ್ರತೆಗಳನ್ನು ತಿಳಿಸಿದ್ದೇವೆ.
ಸಂಬಂಧ
ಸಂಬಂಧವೆಂದ ಮೇಲೆ ಅಲ್ಲಿ ಪ್ರೀತಿ, ವಿಶ್ವಾಸ, ನಂಬಿಕೆಗಳಿರಲೇ ಬೇಕು. ಇಲ್ಲವಾದರೆ ಅದು ಆ ಸಂಬಂಧಕ್ಕೆ ಎಸಗುವ ದ್ರೋಹವಾಗುತ್ತದೆ. ಗಂಡ ಹೆಂಡತಿ ಸಂಬಂಧದಲ್ಲಿ ಈ ರೀತಿಯ ದ್ರೋಹಗಳು ಕಂಡುಬರುತ್ತವೆ. ಆಗ ಆ ವ್ಯಕ್ತಿಗೆ ತನ್ನ ಸಂಗಾತಿ ನನ್ನನ್ನು ಕ್ಷಮಿಸುತ್ತಾರೋ ಇಲ್ಲವೋ ಎನ್ನುವ ಅಭದ್ರತೆ ಕಾಡುತ್ತಿರುತ್ತದೆ.
ದೈಹಿಕ ನೋಟ
ಈಗ ಮಹಿಳೆಯರಿಗೆ ಹೇಗೆ ತಾವು ಇತರ ಮಹಿಳೆಯರಂತೆ ಸುಂದರವಾದ ಮೈಕಟ್ಟನ್ನು ಹೊಂದಬೇಕೆಂಬ ಆಸೆ ಇರುತ್ತದೆಯೋ ಹಾಗೆಯೇ ಪುರುಷರಿಗೂ ಇತರ ಒಳ್ಳೆಯ ಮೈಕಟ್ಟು ಹೊಂದಿರುವ ಪುರುಷರಂತೆ ಇರಬೇಕೆಂಬ ಆಸೆ ಇರುತ್ತದೆ.
ಆದರೆ ತಮ್ಮ ಶರೀರದಿಂದಾಗಿ ಕೀಳರಿಮೆಯ ಭಾವನೆಯನ್ನು ಹೊಂದುತ್ತಾರೆ. ಉತ್ತಮರಾಗಿ ಕಾಣಬೇಕೆಂಬ ಒತ್ತಡ ಅವರನ್ನು ಇನ್ನಷ್ಟು ಕುಗ್ಗಿಸುತ್ತದೆ. ಅಭದ್ರತೆಯ ಭಾವನೆಯನ್ನು ಹುಟ್ಟುಹಾಕುತ್ತದೆ.
ಉದ್ಯೋಗದ ಅಭದ್ರತೆ
ಕಂಪನಿಗಳು ಅತ್ಯಂತ ಅನಿರೀಕ್ಷಿತ ರೀತಿಯಲ್ಲಿ ಉದ್ಯೋಗಿಗಳನ್ನು ವಜಾಗೊಳಿಸಲು ಒಲವು ತೋರುವ ಈ ಸ್ಪರ್ಧಾತ್ಮಕ ಯುಗದಲ್ಲಿ ಪುರುಷರು ತಮ್ಮ ಉದ್ಯೋಗಗಳ ಬಗ್ಗೆ ತುಂಬಾ ಕಾಳಜಿ ವಹಿಸುತ್ತಾರೆ. ಉದ್ಯೋಗ ಭದ್ರತೆಯು ಮನುಷ್ಯನ ಜೀವನದಲ್ಲಿ ಬಹಳ ಮುಖ್ಯವಾದ ಅಂಶವಾಗಿದೆ. ಒಬ್ಬ ವ್ಯಕ್ತಿಯನ್ನು ಆತನ ಕೆಲಸದ ಮುಖಾಂತರ ಗುರುತಿಸುವ ಈ ಕಾಲದಲ್ಲಿ ಜೀವನಕ್ಕೆ ಕೆಲಸ ಅತೀ ಮುಖ್ಯ.
ಭಾವನೆಗಳನ್ನು ವ್ಯಕ್ತಪಡಿಸುವುದು
ನಿಮಗೆ ಗೊತ್ತಿರಬಹುದು ಭಾವನೆಯನ್ನು ವ್ಯಕ್ತಪಡಿಸುವಲ್ಲಿ ಮಹಿಳೆಯರು ಸಮರ್ಥರಾಗಿರುತ್ತಾರೆ. ಆದರೆ ಅನೇಕ ಪುರುಷರು ತಮ್ಮ ಭಾವನೆಯನ್ನು ವ್ಯಕ್ತಪಡಿಸುವಲ್ಲಿ ಸಮಸ್ಯೆಯನ್ನು ಎದುರಿಸುತ್ತಾರೆ. ಇದನ್ನು ಹೇಗೆ ಪರಿಹರಿಸಬೇಕೆಂದು ತಿಳಿದಿರುವುದಿಲ್ಲ, ಇದು ಅವರಲ್ಲಿ ಅಭದ್ರತೆಯ ಭಾವನೆಯನ್ನು ಹುಟ್ಟುಹಾಕುತ್ತದೆ.
ನಿರೀಕ್ಷೆಗಳನ್ನು ಪೂರೈಸುತ್ತಿಲ್ಲ ಎನ್ನುವ ಹಿಂಜರಿಕೆ
ತಮ್ಮ ಸುತ್ತಲಿನ ಜನರ ನಿರೀಕ್ಷೆಗಳನ್ನು ಪೂರೈಸಲು ಪುರುಷರು ಹೋರಾಡುತ್ತಾರೆ. ಅವನ್ನು ತಲುಪಲು ಸಾಧ್ಯವಾಗದಿರುವುದು ಅವರ ಸ್ವಾಭಿಮಾನಕ್ಕೆ ಪೆಟ್ಟು ನೀಡಿದಂತಾಗಿದೆ. ಪುರುಷರು ತಮ್ಮ ಸುತ್ತಲಿನ ಜನರ ನಿರೀಕ್ಷೆಗಳನ್ನು ಪೂರೈಸಬೇಕು ಅದು ಸಾಧ್ಯವಾಗದಿದ್ದರೆ ಅವರು ಯೋಗ್ಯರಲ್ಲ ಎಂಬ ಭಾವನೆ ಅವರಲ್ಲಿ ಮೂಡುತ್ತದೆ.
ಗ್ರಂಥಾಲಯ ಕಂ ಸಹಾಯಕ ಹುದ್ದೆಗೆ ಅರ್ಜಿ….
ಚಿಕ್ಕಬಳ್ಳಾಪುರ ಜಿಲ್ಲೆಯ ಆರು ತಾಲೂಕುಗಳಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹುದ್ದೆ…
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಿಂದ ಕೋ ಆರ್ಡಿನೇಟರ್ ಹುದ್ದೆಗಳು
ಹೆಚ್ಎಎಲ್ ಯಲ್ಲಿ ಅಪ್ರೆಂಟಿಸ್ ಹುದ್ದೆ
ಸಿಬ್ಬಂದಿ ನೇಮಕಾತಿ ಆಯೋಗ ಎಸ್ ಎಸ್ ಸಿ ಇಂದ 39,481 ಹುದ್ದೆಗಳ ನೇಮಕಾತಿ
ಚಿಕ್ಕಬಳ್ಳಾಪುರ ಗ್ರಾಮ ಪಂಚಾಯಿತಿಯಲ್ಲಿ ಗ್ರಂಥ ಪಾಲಕರು ಹಾಗೂ ಮೇಲ್ವಿಚಾರಕರ ಹುದ್ದೆಗಳು
ಮಂಗಳೂರಿನ ಸುರತ್ಕಲ್ ನಲ್ಲಿರುವ ಎನ್ ಐ ಟಿ ಕೆ ಯಲ್ಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ..
ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಫೆಲೋಶಿಪ್ ಹುದ್ದೆಗಳ ಭರ್ತಿ..
ರಾಮನಗರ ಜಿಲ್ಲೆ ವ್ಯಾಪ್ತಿಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹುದ್ದೆಗಳು..
Important: No API Key Entered.
Many features are not available without adding an API Key. Please go to the YouTube Feed settings page to add an API key after following these instructions.