ಮನೆ ಮನರಂಜನೆ ‘ಬೊಂಬೆ ಹೇಳುತೈತೆ’ ಚಲನಚಿತ್ರದ ಟ್ರೈಲರ್ ಬಿಡುಗಡೆ

‘ಬೊಂಬೆ ಹೇಳುತೈತೆ’ ಚಲನಚಿತ್ರದ ಟ್ರೈಲರ್ ಬಿಡುಗಡೆ

0

ಪತ್ರಕರ್ತ, ನಟ, ನಿರ್ದೇಶಕ ಯತಿರಾಜ್ ಅವರು ನಟಿಸಿ ನಿರ್ದೇಶಿಸಿರುವ ‘ಬೊಂಬೆ ಹೇಳುತೈತೆ’ ಚಲನಚಿತ್ರದ ಟ್ರೈಲರ್ ಮತ್ತು ಧ್ವನಿ ಸುರುಳಿಯನ್ನು ರೇಣುಕಾಂಬ ಸ್ಟುಡಿಯೋದಲ್ಲಿ ಮಂಗಳವಾರ ಬಿಡುಗಡೆ ಮಾಡಲಾಯಿತು.

ಚಲನಚಿತ್ರದ ಟ್ರೈಲರ್ ಬಿಡುಗಡೆ ಮಾಡಿದ ಬಿಬಿಎಂಪಿ ಮುಖ್ಯ ಆಯುಕ್ತರ ಸಂಪರ್ಕಾಧಿಕಾರಿ ಶಂಕರ್ ಎಸ್.ಎನ್ ಅವರು ಹಿಂದಿಯಲ್ಲಿ ಸುನೀಲ್ ದತ್ ಮತ್ತು ತಮಿಳಿನಲ್ಲಿ ಪಾರ್ಥಿಬನ್ ರಂತೆ ಹೊಸಪ್ರಯೋಗ ಮಾಡಿರುವ ಯತಿರಾಜ್ ಅವರ ‘ಬೊಂಬೆ ಹೇಳುತೈತೆ‌’ ಸಿನಿಮಾ, ಏಕಪಾತ್ರವುಳ್ಳ ಕನ್ನಡದ ಮೊದಲ ಚಲನಚಿತ್ರವಾಗಲಿ ಎಂದು ಹಾರೈಸಿದರು.

ಪಿ ಆರ್ ಒ‌ ಸುಧೀಂದ್ರ ವೆಂಕಟೇಶ್, ಸಿರಿ‌ ಮ್ಯೂಸಿಕ್ ನ ಡಾ.ಸುರೇಶ್ ಚಿಕ್ಕಣ್ಣ, ಕ್ಯಾಮೆರಾ ಮೆನ್ ವಿದ್ಯಾ ನಾಗೇಶ್, ಪೃಥ್ವಿ ರಾಜ್, ಅರುಣ್ ಕುಮಾರ್ ಉಪಸ್ಥಿತರಿದ್ದರು.