ಮನೆ ರಾಜ್ಯ ಹುಣಸೂರು: ನಾಗರಹೊಳೆ ಉದ್ಯಾನದಲ್ಲಿ ಕಾಣಿಸಿಕೊಂಡ ಕರಿಚಿರತೆ

ಹುಣಸೂರು: ನಾಗರಹೊಳೆ ಉದ್ಯಾನದಲ್ಲಿ ಕಾಣಿಸಿಕೊಂಡ ಕರಿಚಿರತೆ

0

ಹುಣಸೂರು: ನಾಗರಹೊಳೆ ಉದ್ಯಾನದ ದಮ್ಮನಕಟ್ಟೆ ಸಫಾರಿಯಲ್ಲಿ ಕಾಣಿಸಿಕೊಳ್ಳುತ್ತಿದ್ದ ಕಪ್ಪು ಚಿರತೆ ಕೆಲವು ದಿನಗಳಿಂದ ಕಾಣಿಸಿಕೊಂಡಿರಲಿಲ್ಲ.

ಕರಿಚಿರತೆಗಳು ಕಾಣಸಿಗುವುದು ಅಪರೂಪ. ಆದರೆ ಕಳೆದ 15 ದಿನಗಳಿಂದ ಸಫಾರಿಯಲ್ಲಿ ವನ್ಯಪ್ರೀಯರಿಗೆ ದರ್ಶನ ನೀಡುತ್ತಿದ್ದು, ಶುಕ್ರವಾರ (ಮಾ.10) ಸಂಜೆ ಕಾಣಿಸಿಕೊಂಡಿದೆ.

ಸಫಾರಿ ಲೈನ್ ಬಳಿ ಬಂದ ಚಿರತೆ ಬಿಸಿಲಿಗೆ ಮೈಯೊಡ್ಡಿ ರಸ್ತೆಯಲ್ಲಿ ಹೊರಳಾಡುತ್ತಿರುವುದು ಕಾಣಿಸಿದೆ.