ಮನೆ ರಾಷ್ಟ್ರೀಯ ಸದನದಲ್ಲಿ ಮತ್ತೆ ಕೋಲಾಹಲ: ರಾಜ್ಯ ಸಭೆ, ಲೋಕಸಭೆ ಕಲಾಪ ಮತ್ತೆ ಮುಂದೂಡಿಕೆ

ಸದನದಲ್ಲಿ ಮತ್ತೆ ಕೋಲಾಹಲ: ರಾಜ್ಯ ಸಭೆ, ಲೋಕಸಭೆ ಕಲಾಪ ಮತ್ತೆ ಮುಂದೂಡಿಕೆ

0

ನವದೆಹಲಿ: ಅದಾನಿ ಸಮೂಹದ ವಿರುದ್ಧದ ಆರೋಪಗಳ ಕುರಿತು ಜಂಟಿ ಸಂಸದೀಯ ತನಿಖೆಗೆ ಒತ್ತಾಯಿಸಿ ಕಾಂಗ್ರೆಸ್ ಮತ್ತು ಇತರ ವಿರೋಧ ಪಕ್ಷಗಳ ಸಂಸದರು ಸದನದಲ್ಲಿ ಕೋಲಾಹಲ ಸೃಷ್ಟಿಸಿದ್ದರಿಂದ ರಾಜ್ಯಸಭೆಯ ಕಲಾಪವನ್ನು ಸೋಮವಾರ ಮಧ್ಯಾಹ್ನ 2 ಗಂಟೆಗೆ ಮುಂದೂಡಲಾಯಿತು.

ಇತ್ತೀಚೆಗೆ ನಿಧನರಾದ ಪುಣೆ ಸಂಸದ ಗಿರೀಶ್ ಬಾಪಟ್ ಮತ್ತು ಕೇರಳದ ಮಾಜಿ ಸಂಸದ ಇನ್ನೋಸೆಂಟ್ ವರೀದ್ ಅವರಿಗೆ ಸಂತಾಪ ಸೂಚಕವಾಗಿ ಲೋಕಸಭೆ ಕಲಾಪವನ್ನೂ ಮುಂದೂಡಲಾಯಿತು.

ಅದಾನಿ ಸಮೂಹದ ವಿರುದ್ಧದ ಷೇರು ಅಕ್ರಮದ ಆರೋಪಗಳ ಕುರಿತು ಜಂಟಿ ಸಂಸದೀಯ ತನಿಖೆಗೆ ಆಗ್ರಹಿಸಿ ವಿರೋಧ ಪಕ್ಷಗಳು ಪ್ರತಿಭಟನೆ ನಡೆಸುತ್ತಿರುವುದರಿಂದ ಉಬಯ ಸದನಗಳು ಹಲವು ಬಾರಿ ಮುಂದೂಡಿಕೆಯಾಗಿವೆ. ಹೀಗಾಗಿ ಚರ್ಚೆ ಇಲ್ಲದೇ ಬಜೆಟ್‌ ಅನುಮೋದನೆಗೊಂಡಿದೆ.

ಸಂಸತ್ತಿನಲ್ಲಿ ನಡೆಯುತ್ತಿರುವ ಬಜೆಟ್‌ ಅಧಿವೇಶನದ ಎರಡನೇ ಭಾಗವು ಏ.6ರ ವರೆಗೆ ನಡೆಯಲಿದೆ.