ವಿಚ್ಛೇದಿತ ಮಹಿಳೆ ʼಉದ್ಯೋಗಸ್ಥೆʼಯಾಗಿರುವುದರಿಂದ ಮಗುವಿನ ಬಗ್ಗೆ ಸೂಕ್ತ ಕಾಳಜಿ ಮತ್ತು ಗಮನ ನೀಡಲು ಸಾಧ್ಯವಾಗುವುದಿಲ್ಲ ಎಂಬ ಕಾರಣಕ್ಕಾಗಿ ಮಗುವನ್ನ ದತ್ತು ತೆಗೆದುಕೊಳ್ಳಲು ಅನುಮತಿ ನಿರಾಕರಿಸಿದ್ದ ಸಿವಿಲ್ ನ್ಯಾಯಾಲಯದ ಆದೇಶವನ್ನು ಬಾಂಬೆ ಹೈಕೋರ್ಟ್ ರದ್ದುಗೊಳಿಸಿದೆ
[ಶಬನಮಜಹಾನ್ ಮೊಯಿನುದ್ದೀನ್ ಅನ್ಸಾರಿ ಮತ್ತು ಮಹಾರಾಷ್ಟ್ರ ಸರ್ಕಾರ ನಡುವಣ ಪ್ರಕರಣ].
ಮಹಾರಾಷ್ಟ್ರದ ಭೂಸಾವಲ್ನ ಸಿವಿಲ್ ನ್ಯಾಯಾಲಯ ನೀಡಿದ ಕಾರಣ ದುಡಿಯುವ ಮಹಿಳೆಗೆ ಸಂಬಂಧಿಸಿದ ಮಧ್ಯಕಾಲೀನ ಯುಗದ ಮನಸ್ಥಿತಿಯನ್ನು ತೋರಿಸುತ್ತದೆ ಎಂದು ನ್ಯಾ. ಗೌರಿ ಗೋಡ್ಸೆ ಅವರಿದ್ದ ಏಕಸದಸ್ಯ ಪೀಠ ಆದೇಶದ ವೇಳೆ ಹೇಳಿತು.
“ಗೃಹಿಣಿಯಾಗಿರುವ ಜೈವಿಕ ತಾಯಿ ಮತ್ತು ಉದ್ಯೋಗಸ್ಥೆಯಾದ ದತ್ತು ಪಡೆಯುಲಿರುವ ಒಂಟಿ ತಾಯಿ ನಡುವೆ ಸಕ್ಷಮ ನ್ಯಾಯಾಲಯ ಮಾಡಿದ ಹೋಲಿಕೆ ಕುಟುಂಬಗಳ ಬಗೆಗಿನ ಮಧ್ಯಕಾಲೀನ ಯುಗದ ಸಂಪ್ರದಾಯವಾದಿ ಪರಿಕಲ್ಪನೆಗಳ ಮನಸ್ಥಿತಿಯನ್ನು ಬಿಂಬಿಸುತ್ತದೆ” ಎಂದು ಪೀಠ ಮಂಗಳವಾರ ನೀಡಿದ ಆದೇಶದಲ್ಲಿ ಅಸಮಾಧಾನ ವ್ಯಕ್ತಪಡಿಸಿತು.
ಒಂಟಿ ಪೋಷಕರು ದತ್ತು ಪೋಷಕರಾಗಲು ಕಾನೂನು ಮಾನ್ಯತೆ ನೀಡಿರುವಾಗ ಸಿವಿಲ್ ನ್ಯಾಯಾಲಯದ ನಡೆ ಕಾನೂನಿನ ಉದ್ದೇಶವನ್ನು ಮಣಿಸುತ್ತದೆ ಎಂದು ಹೈಕೋರ್ಟ್ ಒತ್ತಿಹೇಳಿತು.
ಸಾಮಾನ್ಯವಾಗಿ, ಕೆಲವು ಅಪರೂಪದ ಸಂದರ್ಭಗಳನ್ನು ಹೊರತುಪಡಿಸಿ ಒಂಟಿ ಪೋಷಕರು ದುಡಿಯಲೇ ಬೇಕಿರುತ್ತದೆ. ಆಗೆಲ್ಲಾ ಕೆಲಸ ಮಾಡುತ್ತಿರುವ ಕಾರಣಕ್ಕೆ ಒಂಟಿ ಪೋಷಕರು ದತ್ತು ಪೋಷಕರಾಗಲು ಅನರ್ಹರು ಎಂದು ತೀರ್ಪು ನೀಡಬೇಕಾದ ಪ್ರಸಂಗ ಬರುತ್ತದೆ ಎಂದು ಹೇಳಿದ ನ್ಯಾಯಾಲಯ ಕೆಳ ನ್ಯಾಯಾಲಯದ ಆದೇಶವನ್ನು ರದ್ದುಪಡಿಸಿ ಮಗುವನ್ನು ದತ್ತು ತೆಗೆದುಕೊಳ್ಳಲು ಮಹಿಳೆಗೆ ಅವಕಾಶ ಮಾಡಿಕೊಟ್ಟಿತು.
ಚಿಕ್ಕಬಳ್ಳಾಪುರ ಜಿಲ್ಲೆಯ ಆರು ತಾಲೂಕುಗಳಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹುದ್ದೆ…
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಿಂದ ಕೋ ಆರ್ಡಿನೇಟರ್ ಹುದ್ದೆಗಳು
ಹೆಚ್ಎಎಲ್ ಯಲ್ಲಿ ಅಪ್ರೆಂಟಿಸ್ ಹುದ್ದೆ
ಸಿಬ್ಬಂದಿ ನೇಮಕಾತಿ ಆಯೋಗ ಎಸ್ ಎಸ್ ಸಿ ಇಂದ 39,481 ಹುದ್ದೆಗಳ ನೇಮಕಾತಿ
ಚಿಕ್ಕಬಳ್ಳಾಪುರ ಗ್ರಾಮ ಪಂಚಾಯಿತಿಯಲ್ಲಿ ಗ್ರಂಥ ಪಾಲಕರು ಹಾಗೂ ಮೇಲ್ವಿಚಾರಕರ ಹುದ್ದೆಗಳು
ಮಂಗಳೂರಿನ ಸುರತ್ಕಲ್ ನಲ್ಲಿರುವ ಎನ್ ಐ ಟಿ ಕೆ ಯಲ್ಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ..
ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಫೆಲೋಶಿಪ್ ಹುದ್ದೆಗಳ ಭರ್ತಿ..
ರಾಮನಗರ ಜಿಲ್ಲೆ ವ್ಯಾಪ್ತಿಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹುದ್ದೆಗಳು..
ವಾಹನ ಚಾಲಕರೇ ಎಚ್ಚರ 130 ಕ್ಕಿಂತ ಹೆಚ್ಚಾದ ವೇಗದಲ್ಲಿ ಚಲಿಸಿದರೆ ಬೀಳುತ್ತೆ FIR
Important: No API Key Entered.
Many features are not available without adding an API Key. Please go to the YouTube Feed settings page to add an API key after following these instructions.