ಮನೆ ರಾಜ್ಯ ಮೈಸೂರು: ಪ್ರಚಾರಕ್ಕೆ ಬಂದ ವಿ.ಸೋಮಣ್ಣ, ಪ್ರತಾಪ್ ಸಿಂಹಗೆ ಸ್ಥಳೀಯರ ಕ್ಲಾಸ್

ಮೈಸೂರು: ಪ್ರಚಾರಕ್ಕೆ ಬಂದ ವಿ.ಸೋಮಣ್ಣ, ಪ್ರತಾಪ್ ಸಿಂಹಗೆ ಸ್ಥಳೀಯರ ಕ್ಲಾಸ್

0

ಮೈಸೂರು: ಲಲಿತಾದ್ರಿಪುರದಲ್ಲಿ ಮಂಗಳವಾರ ಪ್ರಚಾರಕ್ಕೆ ಬಂದಿದ್ದ ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ ಹಾಗೂ ಸಂಸದ ಪ್ರತಾಪ ಸಿಂಹ ಅವರಿಗೆ ಸ್ಥಳೀಯರು ತರಾಟೆಗೆ ತೆಗೆದುಕೊಂಡರು.

Join Our Whatsapp Group

‘ಕ್ಷೇತ್ರದಲ್ಲಿ ಏನು ಅಭಿವೃದ್ಧಿ ಕೆಲಸ ಮಾಡಿದ್ದೀವೆಂದು ಮತ ಕೇಳಲು ಬಂದಿದ್ದೀರಿ?’ ಎಂದು ಕೇಳಿದ್ದರಿಂದ ಸೋಮಣ್ಣ ಮುಜುಗರ ಅನುಭವಿಸಬೇಕಾಯಿತು.

ನೂರಾರು ಕೋಟಿ ರೂಪಾಯಿ ಕೊಟ್ಟಿದ್ದೇವೆ ಎನ್ನುತ್ತೀರಿ. ನಮಗೇನು ಮಾಡಿದ್ದೀರಾ, ನಮಗಿಲ್ಲಿ ಸಮುದಾಯ ಭವನವೂ ಇಲ್ಲ. ನೀವೇ ಉಸ್ತುವಾರಿ ಸಚಿವರಾಗಿದ್ದರಲ್ಲವೇ, ಏನು ಕೊಟ್ಟಿದ್ದೀರಿ? ಎಂದು ಆಕ್ರೋಶದಿಂದ ಕೇಳಿದರು.

ಇದನ್ನು ಮೊಬೈಲ್‌ ಫೋನ್‌ ನಲ್ಲಿ ವಿಡಿಯೊ ಮಾಡುತ್ತಿದ್ದವರನ್ನು ಪ್ರತಾಪ ಮತ್ತು ಸೋಮಣ್ಣ ತಡೆದರು ಎನ್ನಲಾಗಿದೆ.