ಮನೆ ರಾಷ್ಟ್ರೀಯ ಗುಜರಾತ್’ನಲ್ಲಿ ನರಬಲಿ: ಸ್ವಯಂ ಶಿರಚ್ಛೇದ ಮಾಡಿಕೊಂಡ ದಂಪತಿ!

ಗುಜರಾತ್’ನಲ್ಲಿ ನರಬಲಿ: ಸ್ವಯಂ ಶಿರಚ್ಛೇದ ಮಾಡಿಕೊಂಡ ದಂಪತಿ!

0

ರಾಜ್ ಕೋಟ್: ಗುಜರಾತ್ ನಲ್ಲಿ ನರಬಲಿಯ ಭೀಭತ್ಸ ಕೃತ್ಯ ವರದಿಯಾಗಿದ್ದು, ಅಪಾರ ದೈವ ಭಕ್ತಿಯ ಹೊಂದಿದ್ದ ದಂಪತಿ ತಮ್ಮ ಶಿರವನ್ನೇ ದೇವರಿಗೆ ಅರ್ಪಿಸಿರುವ ಘಟನೆ ಬೆಳಕಿಗೆ ಬಂದಿದೆ.

Join Our Whatsapp Group

ಈ ಘಟನೆ ಗುಜರಾತ್’ನ ರಾಜ್ ಕೋಟ್ ಜಿಲ್ಲೆಯಲ್ಲಿ ನಡೆದಿದ್ದು, ಹೇಮುಭಾಯ್ ಮಕ್ವಾನ (38) ಹಾಗೂ ಆತನ ಪತ್ನಿ ಹಂಸಬೆನ್ (35) ಮೃತಪಟ್ಟಿರುವ ದಂಪತಿ.

ತಮ್ಮ ಗುಡಿಸಲಿನಲ್ಲಿ ದಂಪತಿ ಪ್ರತಿನಿತ್ಯ ದೇವರ ಪೂಜೆಯನ್ನು ಮಾಡುತ್ತಿದ್ದರು. ದೇವರಿಗಾಗಿ ತಮ್ಮ ಪ್ರಾಣವನ್ನು ಅರ್ಪಿಸಲು ನಿರ್ಧರಿಸಿದ್ದಾರೆ. ಇದಕ್ಕಾಗಿ ಒಂದು ಯೋಜನೆಯನ್ನು ರೂಪಿಸಿದ್ದಾರೆ. ತಮ್ಮ ಮನೆಯಲ್ಲೇ ಒಂದು ಶಿರಚ್ಛೇದ ಯಂತ್ರವನ್ನು ತಯಾರಿಸಿದ್ದಾರೆ. ಆ ಬಳಿಕ ಒಂದು ಅಗ್ನಿಕುಂಡವನ್ನು ಮಾಡಿದ್ದಾರೆ.  ಶಿರಚ್ಛೇದದ ಯಂತ್ರಕ್ಕೆ ಒಂದು ಹಗ್ಗವನ್ನು ಕಟ್ಟಿದ್ದಾರೆ. ಹಗ್ಗ ಎಳೆದರೆ ಕಟ್ಟಿದ್ದ ಬ್ಲೇಡ್ ತಮ್ಮ ಶಿರಕ್ಕೆ ಬೀಳುತ್ತದೆ. ತಮ್ಮ ಶಿರ ಅಗ್ನಿಕುಂಡಕ್ಕೆ ಬೀಳಬೇಕು ಎನ್ನುವ ಯೋಜನೆಯನ್ನು ಹಾಕಿಕೊಂಡು ದಂಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ದಂಪತಿಗಳು ಹಗ್ಗವನ್ನು ಎಳೆದಿದ್ದಾರೆ. ಆಗ ಚೂಪಾದ ಬೃಹತ್ ಬ್ಲೇಡ್ ವೊಂದು ಅವರ ಕುತ್ತಿಗೆಗೆ ಬಂದು ತಾಗಿದ ಪರಿಣಾಮ ಅವರ ಶಿರ ದೇಹದಿಂದ ಬೇರ್ಪಟ್ಟು ನೇರವಾಗಿ ಅಗ್ನಿಕುಂಡಕ್ಕೆ ಹೋಗಿ ಉರುಳಿ ಬಿದ್ದಿದೆ. ಆ ಮೂಲಕ ದಂಪತಿಗಳು ತಮ್ಮ ಪ್ರಾಣವನ್ನೇ ದೇವರ ಆಚರಣೆಯ ನೆಪದಲ್ಲಿ ಅರ್ಪಿಸಿದ್ದಾರೆ.

ಘಟನೆ ಶನಿವಾರ ರಾತ್ರಿ ಅಥವಾ ಭಾನುವಾರ ಮಧಾಹ್ನದ ವೇಳೆ ನಡೆದಿರಬಹುದು. ಸ್ಥಳದಿಂದ ಮರಣ ಪತ್ರ ಸಿಕ್ಕಿದ್ದು, ಅದರಲ್ಲಿ ತಮ್ಮ ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳಿ ಎಂದು ಕುಟುಂಬದವರಿಗೆ ಹೇಳಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ದಂಪತಿಯ ಮಕ್ಕಳು ಸಂಬಂಧಿಕರ ಮನೆಯಲ್ಲಿ ವಾಸಿಸುತ್ತಿದ್ದಾರೆ. ಪೊಲೀಸರು ಆಕಸ್ಮಿಕ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿದ್ದು, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.