ಮನೆ ರಾಜಕೀಯ ಸೋಲಿನ ಬಗ್ಗೆ ಬೇಸರ ವ್ಯಕ್ತಪಡಿಸಿದ ನಿಖಿಲ್ ಕುಮಾರ್ ಸ್ವಾಮಿ

ಸೋಲಿನ ಬಗ್ಗೆ ಬೇಸರ ವ್ಯಕ್ತಪಡಿಸಿದ ನಿಖಿಲ್ ಕುಮಾರ್ ಸ್ವಾಮಿ

0

ರಾಮನಗರ: ಸೋಲಿನ ವಿಚಾರದ ಬಗ್ಗೆ ಪಕ್ಷಾತೀತವಾಗಿ ಜನ ಬೇಸರ ವ್ಯಕ್ತಪಡಿಸಿದ್ದಾರೆ. ನನಗಿನ್ನೂ ವಯಸ್ಸಿದೆ. ಹೆಚ್. ಡಿ. ದೇವೇಗೌಡರು ಹಾಗೂ ಹೆಚ್ .ಡಿ . ಕುಮಾರಸ್ವಾಮಿಯವರಂತೆ ಜನಸೇವೆ ಮಾಡುತ್ತೇನೆ ಎಂದು ನನ್ನ ನಿಖಿಲ್ ಕುಮಾರ್ ಸ್ವಾಮಿ ತಿಳಿಸಿದ್ದಾರೆ.

Join Our Whatsapp Group

ಚನ್ನಪಟ್ಟಣ ದ ಸಭೆಯಲ್ಲಿ ಮಾತನಾಡಿದ ಅವರು,, ಕುಮಾರಸ್ವಾಮಿ ಅವರು ನಿಮ್ಮ ನಂಬಿ ಸ್ಪರ್ಧೆ ಮಾಡಿದರು. ನೀವು ಕೈಹಿಡಿದ್ರಿ, ಪಕ್ಷ ವನ್ನು ಅಧಿಕಾರಕ್ಕೆ ಹಗಲು ರಾತ್ರಿ ನಿದ್ದೆ ಗೆಟ್ಟು ತರಲು ಪಂಚರತ್ನ ಯಾತ್ರೆ ಮಾಡಿದರು. ಅವರ ಅನುಪಸ್ಥಿತಿಯಲ್ಲಿ ಇಲ್ಲಿನ ಜನ ಅವರನ್ನು ಗೆಲ್ಲಿಸಿದರು. ಇಲ್ಲಿ ಸುನಾಮಿಯನ್ನೆ ಎಬ್ಬಿಸಿದರು. ಯುವಕರು, ರೈತರು ಎಲ್ಲರೂ ಕೈಹಿಡಿದರು ಎಂದರು.

ಮಾಜಿ ಪ್ರಧಾನಿ ದೇವೇಗೌಡರು, ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ರಾಮನಗರದ ಅಭಿವೃದ್ಧಿಗೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ನಾನು ಸೋತಿರಬಹುದು ಆದರೆ ರಾಮನಗರದ ಜನ ಸಾಕಷ್ಟು ಪ್ರೀತಿ ಕೊಟ್ಟಿದ್ದಾರೆ. ಎಂದಿಗೂ ನಾನು ಚಿರಋಣಿ. ನಿಮ್ಮ ಜೊತೆಯಲ್ಲಿ ನಾನು ನನ್ನ ಕುಟುಂಬ ಇರುತ್ತದೆ. ಸೋತ ಮಾತ್ರಕ್ಕೆ ಮನೆಯಲ್ಲಿ ಕೂರುವುದಿಲ್ಲ. ನಿಮ್ಮ ಜತೆ ಇರುತ್ತೇನೆ. ಸೋಲು ಗೆಲುವು ನಮ್ಮ ಕುಟುಂಬಕ್ಕೆ ಹೊಸತಲ್ಲ ಎಂದರು.