ಮನೆ ಅಪರಾಧ ಐಷಾರಾಮಿ ಜೀವನಕ್ಕಾಗಿ ಸರಗಳ್ಳತನ: ಆರೋಪಿ ಬಂಧನ

ಐಷಾರಾಮಿ ಜೀವನಕ್ಕಾಗಿ ಸರಗಳ್ಳತನ: ಆರೋಪಿ ಬಂಧನ

0

ಹಾಸನ: ಐಷಾರಾಮಿ ಜೀವನಕ್ಕಾಗಿ ಮಹಿಳೆಯರ ಸರ ಕದಿಯುತ್ತಿದ್ದ ಸರಗಳ್ಳನನ್ನ ಇದೀಗ ಹಿರಿಸಾವೆ ವೃತ್ತದ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.

Join Our Whatsapp Group

ಹಾಸನ ಜಿಲ್ಲೆಯ, ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯ ಹಾಗೂ ಮಂಡ್ಯ ಜಿಲ್ಲೆಯ ಕಿಕ್ಕೇರಿ ಪೊಲೀಸ್ ವ್ಯಾಪ್ತಿಯಲ್ಲಿ ಮಹಿಳೆಯರ ಮಾಂಗಲ್ಯ ಸರಗಳ್ಳತನ ಮಾಡಿದ್ದ ಆರೋಪಿ ಚನ್ನರಾಯಪಟ್ಟಣ ತಾಲ್ಲೂಕಿನ, ಮಾಳೇನಹಳ್ಳಿ ಗ್ರಾಮದ ಸುಧಾಕರ್ (23)ನನ್ನ ಬಂಧಿಸಲಾಗಿದೆ.

ಬಂಧಿತನಿಂದ ಬರೊಬ್ಬರಿ 12,23,000ಲಕ್ಷ ರೂ ಬೆಲೆಯ 211 ಗ್ರಾಂ ತೂಕದ 7 ಚಿನ್ನದ ಮಾಂಗಲ್ಯ ಸರಗಳು ಹಾಗೂ ಕೃತ್ಯಕ್ಕೆ ಬಳಸುತ್ತಿದ್ದ ಪಲ್ಸರ್ ಬೈಕ್ ​ನ್ನು ವಶ ಪಡಿಸಿಕೊಳ್ಳಲಾಗಿದೆ.

ಈ ಕುಖ್ಯಾತ ಸರಗಳ್ಳ ಸುಧಾಕರ್​ ಎರಡು ತಿಂಗಳಲ್ಲಿ ಬರೊಬ್ಬರಿ ಒಂಭತ್ತು ಕಡೆ ಸರಗಳ್ಳತನ ಮಾಡಿದ್ದನು. ಎಂಟು ಕಡೆ ಕಳ್ಳತನ ಮಾಡಿದ್ದರೂ, ಯಾರ ಕೈಗೂ ಸಿಗದೆ ತಲೆ ಮರೆಸಿಕೊಂಡಿದ್ದ. ಆದರೆ ಆರೋಪಿ ಸುಧಾಕರ್ ​ನ ಚಪ್ಪಲಿ ಗುರುತು ಆಧರಿಸಿ ಆರೋಪಿಯನ್ನು ಪೊಲೀಸರು ಸೆರೆ ಹಿಡಿದಿದ್ದಾರೆ.