ಮನೆ ಸುದ್ದಿ ಜಾಲ ಮೈಸೂರು ನಗರ ಘಟಕದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪಿಎಸ್ ಐ ಗಳ ವರ್ಗಾವಣೆ

ಮೈಸೂರು ನಗರ ಘಟಕದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪಿಎಸ್ ಐ ಗಳ ವರ್ಗಾವಣೆ

0

ಬೆಂಗಳೂರು: ರಾಜ್ಯ ಸರ್ಕಾರ ಆಡಳಿತ ವರ್ಗಕ್ಕೆ ಚುರುಕು ಮುಟ್ಟಿಸುವ ನಿಟ್ಟಿನಲ್ಲಿ ಪೊಲೀಸ್ ಉಪ ನಿರೀಕ್ಷಕರನ್ನು ವರ್ಗಾವಣೆ ಮಾಡಲಾಗಿದೆ.

Join Our Whatsapp Group

ಮೈಸೂರು ನಗರ ಘಟಕದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪಿಎಸ್ ಐ(ಸಿವಿಲ್) ಅವರನ್ನು ವರ್ಗಾಯಿಸಲಾಗಿದೆ.

ಆಲನಹಳ್ಳಿ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಟಿ.ಎಸ್.ಮಹೇಂದ್ರ ಅವರನ್ನು ಜೆ.ಎಲ್.ಪುರಂ ಠಾಣೆಗೆ, ಅಶೋಕಪುರಂ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಎಂ.ಕೆ.ಸ್ಮಿತಾ ಅವರನ್ನು ಸರಸ್ವತಿಪುರಂ ಪೊಲೀಸ್ ಠಾಣೆಗೆ, ದೇವರಾಜ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಎಂ.ಆರ್.ಲೀಲಾವತಿ ಅವರನ್ನು ಮಹಿಳಾ ಠಾಣೆಗೆ, ಲಷ್ಕರ್ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಧನಲಕ್ಷ್ಮಿ ಅವರನ್ನು ನರಸಿಂಹರಾಜ ಠಾಣೆಗೆ,  ಮಂಡಿ ಠಾಣೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ವಿಶ್ವನಾಥ್ ಕೆ ಅವರನ್ನು ವಿಜಯನಗರ ಠಾಣೆಗೆ, ದೇವರಾಜ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಎಸ್ ರಾಜು ಅವರನ್ನು ನರಸಿಂಹರಾಜ ಠಾಣೆಗೆ, ಕೆ.ಆರ್.ಸಂಚಾರ ಠಾಣೆಯಲ್ಲಿ  ಕಾರ್ಯನಿರ್ವಹಿಸುತ್ತಿರುವ ಪೂಜಾ ಹತ್ತರಕಿ.ಎಸ್. ಅವರ ವಿದ್ಯಾರಣ್ಯಪುರಂ ಠಾಣೆಗೆ, ಲಷ್ಕರ್ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಗೌತಮ್ ಗೌಡ ಬಿ ಅವರನ್ನು ವಿ ವಿ ಪುರಂ ಸಂಚಾರ ಠಾಣೆಗೆ, ವಿಜಯನಗರ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ವಿ.ಆರ್.ಶಬರೀಶ್  ಮೇಟಗಳ್ಳಿ ಠಾಣೆಗೆ ವರ್ಗಾಯಿಸಲಾಗಿದೆ.

 ಜೆ.ಎಲ್.ಪುರಂ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಪಿ.ವೈ ಹರೀಶ್ ಅವರನ್ನು ಕೃಷ್ಣರಾಜ ಠಾಣೆಗೆ, ವಿದ್ಯಾರಣ್ಯಪುರಂ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಎನ್.ವಿ.ರಂಗಸ್ವಾಮಿ ಅವರನ್ನು ಮಂಡಿ ಠಾಣೆಗೆ, ಸಿ.ಎಸ್.ಬಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಶಿವಕುಮಾರ್ ಡಿ.ಆರ್ ಅವರನ್ನು ದೇವರಾಜ್ ಸಂಚಾರ ಠಾಣೆಗೆ, ವಿದ್ಯಾರಣ್ಯಪುರಂ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಿದ್ದಾಬಾಯಿ ಮಮದಾಪುರ ಅವರನ್ನು ನಜರ್ ಬಾದ್ ಠಾಣೆಗೆ, ಮೇಟಗಳ್ಳಿ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕಿರಣ್ ಎ ಹಂಪಿಹೊಳಿ ಅವರನ್ನು ಸಿಸಿಬಿ-1ಕ್ಕೆ, ನರಸಿಂಹರಾಜ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಗಂಗಾಧರ ಕೆ.ಎಸ್ ಅವರನ್ನು ಆಲನಹಳ್ಳಿ ಠಾಣೆಗೆ, ವಿ ವಿ ಪುರಂ ಸಂಚಾರ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ನಾಗರಾಜು ಎಸ್. ಅವರನ್ನು ನರಸಿಂಹರಾಜ ಸಂಚಾರ ಠಾಣೆಗೆ, ಲಕ್ಷ್ಮಿಪುರಂ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕೀರ್ತಿ ಸಿ ಅವರನ್ನು ಉದಯಗಿರಿ ಠಾಣೆಗೆ, ನರಸಿಂಹರಾಜ ಸಂಚಾರ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಗಣೇಶ್ ಎಸ್.ಕೆ ಅವರನ್ನು ನರಸಿಂಹರಾಜ ಠಾಣೆ ಅಪರಾಧ ವಿಭಾಗಕ್ಕೆ, ಸರಸ್ವತಿಪುರಂ ಠಾಣೆಯಲ್ಲಿ  ಕಾರ್ಯನಿರ್ವಹಿಸುತ್ತಿದ್ದ ರಮೇಶ್ ಅವರನ್ನು ಸಿದ್ದಾರ್ಥ ಸಂಚಾರ ಠಾಣೆಗೆ, ವಿಜಯನಗರ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅಶ್ವಿನಿ ಅನಂತಪುರ ಅವರನ್ನು ವಿಜಯನಗರ ಠಾಣೆ ಅಪರಾಧ ವಿಭಾಗಕ್ಕೆ, ನಜರ್ ಬಾದ್ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ವೈಶಾಲಿ ಅವರನ್ನು ಅಶೋಕಪುರಂ ಠಾಣೆಗೆ, ಆಲನಹಳ್ಳಿ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ನಿತ್ಯಾನಂದ ಎಂ.ಎಸ್ ಅವರನ್ನು ವಿದ್ಯಾರಣ್ಯಪುರಂ ಠಾಣೆಗೆ ಹಾಗೂ ಸಿಇಎನ್ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಶೇಖ್ ಫಿರೋಜ್ ಅವರನ್ನು ಅಶೋಕಪುರಂ ಠಾಣೆಗೆ ವರ್ಗಾವಣೆ ಮಾಡಲಾಗಿದೆ.