ಮನೆ ಸುದ್ದಿ ಜಾಲ ಮೈಸೂರು: “ಚಿಗುರು ಆಶ್ರಮ”ದ ಎರಡನೆ ಶಾಖೆ ಉದ್ಘಾಟನೆ

ಮೈಸೂರು: “ಚಿಗುರು ಆಶ್ರಮ”ದ ಎರಡನೆ ಶಾಖೆ ಉದ್ಘಾಟನೆ

0

ಮೈಸೂರು: ಜನಸೇವಾ ಟ್ರಸ್ಟ್(ರಿ.) ಹಾಗೂ ಸಂಕರ್ ಸುಹಾಸ್ ಟ್ರಸ್ಟ್(ರಿ.) ಸಂಯುಕ್ತ ಆಶ್ರಯದಲ್ಲಿ “ಚಿಗುರು ಆಶ್ರಮ”ದ ಎರಡನೆಯ ಶಾಖೆಯನ್ನು ಮೈಸೂರಿನ ದೊಡ್ಡಕಾನ್ಯಾ ದಲ್ಲಿ ಉದ್ಘಾಟಿಸಲಾಯಿತು.

Join Our Whatsapp Group

ಜನಸೇವಾ ಟ್ರಸ್ಟ್ (ರಿ.) ನ “ಚಿಗುರು ಆಶ್ರಮ” ದ ಎರಡನೆಯ ಶಾಖೆಗೆ ಯಾವುದೇ ಬಾಡಿಗೆಯ ಅಪೇಕ್ಷೆ ಇಲ್ಲದೆ ಈಶ್ವರ್ ಭಟ್ ಆಶ್ರಮದ  ಕಟ್ಟಡವನ್ನು ಉಚಿತವಾಗಿ ನೀಡಿದ್ದಾರೆ.

ಈಶ್ವರ್ ಭಟ್ ಮೂಲತಃ ಡೆಲ್ಲಿ ಸರ್ಕಾರದ ಸರ್ವೋದಯ ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲರಾಗಿ ಹಲವಾರು ವರ್ಷಗಳಕಾಲ ಸೇವೆ ಸಲ್ಲಿಸಿದ್ದಾರೆ. ಇವರ ಇಬ್ಬರೂ ಗಂಡು ಮಕ್ಕಳು ಕೂಡ ವಿಶೇಷ ಚೇತನರು. ಆದ್ದರಿಂದ ಇಬ್ಬರು ಮಕ್ಕಳ ಹೆಸರಿನಲ್ಲಿ ಶಂಕರ್ ಸುಹಾಸ್ ಚಾರಿಟಬಲ್ ಟ್ರಸ್ಟ್(ರಿ.) ನ ಸ್ಥಾಪಿಸಿದ್ದಾರೆ.

ಅಲ್ಲದೇ ತಾವು ಕಷ್ಟಪಟ್ಟು ದುಡಿದ ಹಣದಲ್ಲಿ ಇಂತಹ ನೂರಾರು ವಿಶೇಷ ಚೇತನರಿಗೆ ಆಶ್ರಯ ನೀಡಬೇಕೆಂಬ ಉದ್ದೇಶದಿಂದ ಮೈಸೂರಿನ  ದೊಡ್ಡಕಾನ್ಯಾ ಎಂಬ ಊರಿನಲ್ಲಿ ತಮ್ಮ ಸ್ವಂತ ಐದು ಎಕರೆ ಜಮೀನಿನಲ್ಲಿ 50ಜನ ಉಳಿದುಕೊಳ್ಳಬಹುದಾದ ವಿಶಾಲವಾದ ಆಶ್ರಮದ ಕಟ್ಟಡ ನಿರ್ಮಾಣ ಮಾಡಿದ್ದಾರೆ.

ಇವರ ಸೇವಾ ಕಾರ್ಯಕ್ಕೆ ಕೂರ್ಗಳ್ಳಿಯಲ್ಲಿರುವ ಜನಸೇವಾ ಟ್ರಸ್ಟ್(ರಿ.) ನ ಚಿಗುರು ಆಶ್ರಮದ ಸುಷ್ಮಾರವಿಕುಮಾರ್ ಜೊತೆಯಾಗಿದ್ದಾರೆ.

ಜನಸೇವಾ ಟ್ರಸ್ಟ್(ರಿ.) ಹಾಗೂ ಸಂಕರ್ ಸುಹಾಸ್ ಟ್ರಸ್ಟ್(ರಿ.) ಸಂಯುಕ್ತ ಆಶ್ರಯದಲ್ಲಿ “ಚಿಗುರು ಆಶ್ರಮ” ವನ್ನು ಇಂದು ಎನ್.ಆರ್.ಗ್ರೂಪ್ಸ್ ನ ಅಧ್ಯಕ್ಷರಾದ ಆರ್.ಗುರು ಉದ್ಘಾಟಿಸಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ರೋಟರಿ ಐವರಿಸಿಟಿ ಸುನೀಲ್ ಬಾಳಿಗ, ನಗರಾಭಿವೃದ್ಧಿ ಪ್ರಾಧಿಕಾರದ ಸಹಾಯಕ ನಿರ್ದೇಶಕ ಪಿ.ಎಸ್.ನಟರಾಜ್,  ಯುವ ಬ್ರಿಗೇಡ್ ರಾಜ್ಯ ಸಂಚಾಲಕರು ಚಂದ್ರಶೇಖರ್, ನಿವೃತ್ತ ಅಭಿಯಂತರ ತ್ರಿಯಂಬಕ. ಬಾ.ಸ.ಪ.ಪೂ.ಕಾಲೇಜಿನ ಉಪನ್ಯಾಸಕ ಜೆ.ಜಿ.ರಾಜೇಗೌಡ, ಶಂಕರ್ ಸುಹಾಸ್ ಚಾರಿಟಬಲ್ ಟ್ರಸ್ಟ್(ರಿ.) ಅಧ್ಯಕ್ಷ ಈಶ್ವರ್ ಭಟ್ ಉಪಸ್ಥಿತರಿದ್ದರು.