ಮನೆ ಅಪರಾಧ ಮದ್ದೂರು: ಓರ್ವ ಸರಗಳ್ಳ, ಇಬ್ಬರು ಮನೆಗಳ್ಳರ ಬಂಧನ

ಮದ್ದೂರು: ಓರ್ವ ಸರಗಳ್ಳ, ಇಬ್ಬರು ಮನೆಗಳ್ಳರ ಬಂಧನ

0

ಮದ್ದೂರು:ಮಹಿಳೆಯ ಕುತ್ತಿಗೆಯಲ್ಲಿದ್ದ ಚಿನ್ನದ ಸರ ಕಸಿದಿದ್ದ ಸರಗಳ್ಳ ಮತ್ತು ಮನೆಗೆ ನುಗ್ಗಿ ಆಭರಣ ಕಳವು ಮಾಡಿದ್ದ ಇಬ್ಬರು ಮನೆಗಳ್ಳರನ್ನು ಮದ್ದೂರು ಠಾಣಾ ಪೊಲೀಸರು ಬಂದಿಸಿದ್ದಾರೆ.

Join Our Whatsapp Group


ಸರ ಕಳ್ಳತನವನ್ನೇ ಕಸಬು ಮಾಡಿಕೊಂಡಿದ್ದ ಹಾಸನ ಜಿಲ್ಲೆಯ ಸಕಲೇಶಪುರದ ಸುದೀಪ ಬಂದಿತನಾಗಿದ್ದು.ಈತ ಹಳೆ ಕಳ್ಳನಾಗಿದ್ದು ಆದೇ ಪ್ರವೃತ್ತಿಯನ್ನು ಮುಂದುವರೆಸಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ.
ಮದ್ದೂರು ಪಟ್ಟಣದ ಲೀಲಾವತಿ ಬಡಾವಣೆಯಲ್ಲಿ ಕಳೆದ ಮೇ ತಿಂಗಳಿನಲ್ಲಿ ಪುಟ್ಟ ಲಕ್ಷ್ಮಮ್ಮ ರ ಕುತ್ತಿಗೆಯಲ್ಲಿದ್ದ ಮಾಂಗಲ್ಯ ಸರವನ್ನ ಕಸಿದು ಪರಾರಿಯಾಗಿದ್ದನು, ಆರೋಪಿಯನ್ನು ಬಂದಿಸಿ 20 ಗ್ರಾಂ ತೂಕದ ಒಂದು ಲಕ್ಷ ರೂ ಮೌಲ್ಯದ ಚಿನ್ನದ ಮಾಂಗಲ್ಯ ಸರವನ್ನು ವಸಕ್ಕೆ ಪಡೆಯಲಾಗಿದೆ
ಮನೆಗೆ ನುಗ್ಗಿ ಕಳವು ಮಾಡಿದ ಪ್ರಕರಣದಲ್ಲಿ ಮೈಸೂರು ಜಿಲ್ಲೆ, ಬನ್ನೂರು ಹೋಬಳಿ ಚಾಮನಹಳ್ಳಿಯ ಮಂಜು ಮತ್ತು ಗಣೇಶ್ ನನ್ನು ಪೊಲೀಸರು ಬಂದಿಸಿದ್ದಾರೆ.
ಪಟ್ಟಣದ ಕೆ.ಎಚ್. ವಿ ನಗರದ ಸೇಂಟ್ ಜಾನ್ಸ್ ಕಾಲೇಜು ರಸ್ತೆಯ ಹರೀಶ್ ಬಾಬು – ಲೀಲಾ ರವರ ಮನೆಯಲ್ಲಿ ಚಿನ್ನಾಭರಣ ಕಳವು ಮಾಡಿದ್ದರು, ಇಬ್ಬರು ಮನೆಗಳ್ಳರನ್ನು ಬಂದಿಸಿರುವ ಪೊಲೀಸರು ಇವರಿಂದ 20 ಗ್ರಾಂ ತೂಕದ ಆಭರಣವನ್ನು ವಶಕ್ಕೆ ಪಡೆದಿದ್ದಾರೆ.