ಮನೆ ಸುದ್ದಿ ಜಾಲ ಮಂಡ್ಯ: ರಸಗೊಬ್ಬರ ಸೇವಿಸಿ ಹಸು, ಎರಡು ಎತ್ತು ಮೃತ

ಮಂಡ್ಯ: ರಸಗೊಬ್ಬರ ಸೇವಿಸಿ ಹಸು, ಎರಡು ಎತ್ತು ಮೃತ

0

ಮಂಡ್ಯ: ಮೇವು ಸೇವಿಸುವ ವೇಳೆ  ರಸಗೊಬ್ಬರ ಸೇವಿಸಿ ಹಸು ಹಾಗೂ ಎರಡು ಎತ್ತು ಮೃತಪಟ್ಟಿರುವ ಘಟನೆ ಮದ್ದೂರು ತಾಲೂಕಿನ ವಳೆಗೆರಹಳ್ಳಿಯಲ್ಲಿ ನಡೆದಿದೆ.

Join Our Whatsapp Group

ರೈತ ಮಹಿಳೆ ಸುಮಿತ್ರರಿಗೆ ಸೇರಿದ ಎರೆಡು ಎತ್ತು ಹಾಗೂ ಸೀಮೆಹಸು ಸಾವನ್ನಪ್ಪಿವೆ. ಗದ್ದೆಗೆ ಹಾಕಲೆಂದು ಮೇವಿನ ಪಕ್ಕದಲ್ಲೆ ರಸಗೊಬ್ಬರ ಇಟ್ಟಿದ್ದು, ಮೇವು ಎಂದು ಕೊಂಡು ರಸಗೊಬ್ಬರವನ್ನ ಜಾನುವಾರುಗಳು ಸೇವಿಸಿದ ಕಾರಣ ಸ್ಥಳದಲ್ಲೇ ಕುಸಿದು  ಜಾನುವಾರುಗಳು ಬಿದ್ದಿದೆ.

ಕೂಡಲೇ ಅಸ್ವಸ್ಥಗೊಂಡ ಜಾನುವಾರುಗಳಿಗೆ ಚಿಕಿತ್ಸೆ ನೀಡಿದರೂ ಕೂಡ ಫಲಕಾರಿಯಾಗದೇ ಸಾವನ್ನಪ್ಪಿವೆ.