ಮನೆ ಸುದ್ದಿ ಜಾಲ ಬೆಂಗಳೂರು-ಮೈಸೂರು ಎಕ್ಸ್‌ ಪ್ರೆಸ್‌ ಹೈವೇನಲ್ಲಿ ಸರಣಿ ಅಪಘಾತದಲ್ಲಿ ಐವರಿಗೆ ಗಾಯ

ಬೆಂಗಳೂರು-ಮೈಸೂರು ಎಕ್ಸ್‌ ಪ್ರೆಸ್‌ ಹೈವೇನಲ್ಲಿ ಸರಣಿ ಅಪಘಾತದಲ್ಲಿ ಐವರಿಗೆ ಗಾಯ

0

ಮಂಡ್ಯ: ಬೆಂಗಳೂರು-ಮೈಸೂರು ಎಕ್ಸ್‌ ಪ್ರೆಸ್‌ ಹೈವೇನಲ್ಲಿ ಸರಣಿ ಅಪಘಾತವಾಗಿದ್ದು, ಐವರಿಗೆ ಗಾಯ, ಓರ್ವನ ಸ್ಥಿತಿ ಗಂಭೀರವಾಗಿದೆ.

Join Our Whatsapp Group

ಮಂಡ್ಯ ತಾಲೂಕಿನ ತೂಬಿನಕೆರೆ ಬಳಿ ಸರಣಿ ಅಪಘಾತ ಸಂಭವಿದೆ.  ಹೈವೇನಲ್ಲಿ ರಸ್ತೆ ಮಧ್ಯದ ಗಿಡಗಳಿಗೆ ಟ್ಯಾಂಕರ್‌ ನಿಂದ ನೀರು ಹರಿಸುತ್ತಿದ್ದರು. ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳದೆ  ಸಿಬ್ಬಂದಿ ಗಿಡಗಳಿಗೆ ನೀರು ಹರಿಸುತ್ತಿದ್ದರು.

ಈ ವೇಳೆ ನೀರಿನ ಟ್ಯಾಂಕರ್ ಕಾಣದೇ ಕಾರು ಡಿಕ್ಕಿ ಹೊಡೆದಿದೆ. ನಂತರ ಹಿಂಬದಿಯಿಂದ ಮತ್ತೆರಡು ಕಾರುಗಳು ಡಿಕ್ಕಿ ಹೊಡೆದಿವೆ. ನೀರಿನ ಟ್ಯಾಂಕರ್‌ ಗೆ ಡಿಕ್ಕಿಯಿಂದ ಕಾರಿನಲ್ಲಿದ್ದ ಐವರಿಗೆ ಗಾಯಗಳಾಗಿದ್ದು, ಓರ್ವನ ಸ್ಥಿತಿ ಗಂಭೀರ, ಮಂಡ್ಯದ ಮಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.