ಮನೆ ಸುದ್ದಿ ಜಾಲ ಸಾಮೂಹಿಕ ರಾಜೀನಾಮೆ ಸಲ್ಲಿಸಲು ಬೆಂಗಳೂರು ವಿವಿ ಸಿಂಡಿಕೇಟ್ ಸದಸ್ಯರ ತೀರ್ಮಾನ

ಸಾಮೂಹಿಕ ರಾಜೀನಾಮೆ ಸಲ್ಲಿಸಲು ಬೆಂಗಳೂರು ವಿವಿ ಸಿಂಡಿಕೇಟ್ ಸದಸ್ಯರ ತೀರ್ಮಾನ

0

ಬೆಂಗಳೂರು(Bengaluru): ಬೆಂಗಳೂರು ವಿಶ್ವವಿದ್ಯಾಲಯದ(Bengaluru University) ಸಿಂಡಿಕೇಟ್‌ಗೆ ರಾಜ್ಯ ಸರ್ಕಾರದಿಂದ ನಾಮನಿರ್ದೇಶನಗೊಂಡಿರುವ ಸದಸ್ಯರು ಸಾಮೂಹಿಕವಾಗಿ ರಾಜೀನಾಮೆ ಸಲ್ಲಿಸಲು ನಿರ್ಧರಿಸಿದ್ದಾರೆ.

‘ರಾಜ್ಯ ಸರ್ಕಾರ ಇತ್ತೀಚೆಗೆ ಇಬ್ಬರ ಸಿಂಡಿಕೇಟ್‌ ಸದಸ್ಯತ್ವ ರದ್ದುಪಡಿಸಿರುವ ಕ್ರಮವನ್ನು ಖಂಡಿಸಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಉನ್ನತ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅವರಿಗೆ ರಾಜೀನಾಮೆ ಸಲ್ಲಿಸಲಾಗುವುದು’ ಎಂದು ಸಿಂಡಿಕೇಟ್ ಸದಸ್ಯರಾದ ಟಿ.ವಿ. ರಾಜು ಮತ್ತು ಗೋಪಿನಾಥ್‌ ಅವರು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ  ಮಾಹಿತಿ ನೀಡಿದ್ದಾರೆ.

ಪ್ರೇಮ್‌ ಸೋಹನ್‌ಲಾಲ್‌ ಮತ್ತು ಗೋವಿಂದರಾಜು ಅವರ ನಾಮನಿರ್ದೇಶನವನ್ನು ರದ್ದುಪಡಿಸಿದ್ದ ರಾಜ್ಯ ಸರ್ಕಾರ, ಇವರ ಸ್ಥಾನಕ್ಕೆ ಡಾ.ಸಿ.ಆರ್‌. ಮಹೇಶ್‌ ಮತ್ತು ಡಾ. ಅನಿಲ್‌ ಕುಮಾರ್‌ ಈಸೋ ಅವರನ್ನು ನೇಮಿಸಿತ್ತು.