ಮನೆ ರಾಜಕೀಯ ರಾಜೀನಾಮೆ ನೀಡಿ ತನಿಖೆಗೆ  ಸಹಕರಿಸಿ: ಯತೀಂದ್ರ ಸಿದ್ಧರಾಮಯ್ಯ

ರಾಜೀನಾಮೆ ನೀಡಿ ತನಿಖೆಗೆ  ಸಹಕರಿಸಿ: ಯತೀಂದ್ರ ಸಿದ್ಧರಾಮಯ್ಯ

0

ಮೈಸೂರು: ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಈಶ್ವರಪ್ಪ ರಾಜೀನಾಮೆ ನೀಡಿ ಪಾರದರ್ಶಕ ತನಿಖೆಗೆ ಸಹಕರಿಸಬೇಕು ಎಂದು ಶಾಸಕ ಯತೀಂದ್ರ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

ಮೈಸೂರನ ತಿ.ನರಸೀಪುರದಲ್ಲಿ ಇಂದು ಮಾತನಾಡಿದ ಶಾಸಕ ಯತೀಂದ್ರ ಸಿದ್ಧರಾಮಯ್ಯ, ಒಬ್ಬ ಸಚಿವರ ಮೇಲೆ ಈ ರೀತಿಯ ಗಂಭೀರ ಆರೋಪ ಬಂದಾಗ ರಾಜೀನಾಮೆ ಕೊಡಲೇಬೇಕು. ಆ ಮೂಲಕ ಪಾರದರ್ಶಕವಾದ ತನಿಖೆಗೆ ಸಹಕರಿಸಬೇಕು. ಈಶ್ವರಪ್ಪನನವರು ರಾಜೀನಾಮೆ ಕೊಡದೇ ಇದ್ದರೆ. ಮುಖ್ಯಮಂತ್ರಿಗಳೇ ಸ್ವತಃ ತಾವೇ ರಾಜೀನಾಮೆ ಪಡೆಯಬೇಕು ಎಂದು ಆಗ್ರಹಿಸಿದರು.

ಈಗಾಗಲೇ 40% ಕಮಿಷನ್ ಆರೋಪ ಅವರ ಮೇಲೆ ಕೇಳಿ ಬಂದಿತ್ತು. ಜೊತೆಗೆ ಗುತ್ತಿಗೆದಾರರರೊಬ್ಬ ಆರೋಪ ಮಾಡಿ ಆತ್ಮಹತ್ಯೆ ಮಾಡಿಕೊಂಡಿರುವುದು. ಈಗಾಗಲೇ ಕಾಂಗ್ರೆಸ್ ನಾಯಕರು ಗವರ್ನರ್ ರನ್ನ ಭೇಟಿ ಮಾಡಿದ್ದೇವೆ. ಈಶ್ವರಪ್ಪರನ್ನ ಸಚಿವ ಸಂಪುಟದಿಂದ ಕೈ ಬಿಡುವಂತೆ ಮನವಿ ಮಾಡಿದ್ದೇವೆ. ಮುಂದಿನ ದಿನಗಳಲ್ಲಿ ಬಿಜೆಪಿ ಸರ್ಕಾರ ಹಾಗೂ ಈಶ್ವರಪ್ಪ ವಿರುದ್ಧ ರಾಜ್ಯದ್ಯಂತ ಪ್ರತಿಭಟನೆ ನಡೆಸುತ್ತೇವೆ ಎಂದು ಶಾಸಕ ಯತೀಂದ್ರ ಸಿದ್ದರಾಮಯ್ಯ ಹೇಳಿದರು.