ಮನೆ Breaking News ಮಂಡ್ಯ: ರೀಲ್ಸ್ ಹುಚ್ಚು ಬಿಡದ ಪತ್ನಿಯನ್ನು ಕೊಂದು ನಾಲೆಗೆ ಎಸೆದ ಪತಿ

ಮಂಡ್ಯ: ರೀಲ್ಸ್ ಹುಚ್ಚು ಬಿಡದ ಪತ್ನಿಯನ್ನು ಕೊಂದು ನಾಲೆಗೆ ಎಸೆದ ಪತಿ

0

ಮಂಡ್ಯ: ಪತ್ನಿಯ ರೀಲ್ಸ್ ಹುಚ್ಚು ಕಂಡು ಕೋಪಗೊಂಡ ಪತಿ ಆಕೆಯನ್ನು ಕೊಂದು ನಾಲೆಗೆ ಎಸೆದಿರುವ ಘಟನೆ ಶ್ರೀರಂಗಪಟ್ಟಣ ತಾಲೂಕಿನ ಮಂಡ್ಯಕೊಪ್ಪಲು ಗ್ರಾಮದಲ್ಲಿ ನಡೆದಿದೆ.

ಅರೆಕೆರೆ ಗ್ರಾಮದ ಪೂಜಾ(28) ಗಂಡನಿಂದ ಕೊಲೆಯಾದ ಪತ್ನಿ.

ಶ್ರೀನಾಥ್ (32) ಪತ್ನಿಯನ್ನು ಕೊಂದು ನಾಲೆಗೆ ಎಸೆದ ಕಿರಾತಕ ಪತಿ.

ಪತ್ನಿಯ ಮೊಬೈಲ್ ರೀಲ್ಸ್ ಹುಚ್ಚಿನಿಂದ ರೋಸಿಹೋಗಿದ್ದ ಪತಿ, ಮೊಬೈಲ್ ಬಸಳಸದಂತೆ ಸಾಕಷ್ಟು ಬಾರೀ ಎಚ್ಚರಿಕೆ ನೀಡಿದ್ದ. ಆದರೆ ಪತ್ನಿ ಪೂಜಾ ಇತ್ತೀಚಿಗೆ ಮೊಬೈಲ್ ನಲ್ಲಿ ಹೆಚ್ಚು ಕಾಲ ಹರಣ ಮಾಡುತ್ತಿದ್ದಳು. ಇದರಿಂದ ಅನೈತಿಕ ಸಂಬಂಧದ ಇರುವ ಶಂಕೆ ಆತನಲ್ಲಿ ಮೂಡಿದೆ. ಇದರಿಂದಾಗಿ ಪತ್ನಿಯನ್ನು ಕೊಂದ ಪತಿ ನಾಲೆಗೆ ಎಸೆದಿದ್ದಾನೆ.

ಪತ್ನಿ ಹತ್ಯೆ ನಂತರ ಆರೋಪಿ ಪತಿ ನಾಪತ್ತೆಯಾಗಿದ್ದು, ನೆನ್ನೆ ಮಹದೇವಪುರದ ನಾಲೆಯಲ್ಲಿ ಕೊಲೆಯಾಗಿದ್ದ ಪತ್ನಿ ಪೂಜಾ ಶವ ಪತ್ತೆಯಾಗಿದೆ.

ಅರೆಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು ,ಆರೋಪಿ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.