ಮನೆ ರಾಜ್ಯ ನಮ್ಮ ಸರ್ಕಾರ ಭದ್ರವಾಗಿದೆ: ಸಚಿವ ಡಿ.ಸುಧಾಕರ್

ನಮ್ಮ ಸರ್ಕಾರ ಭದ್ರವಾಗಿದೆ: ಸಚಿವ ಡಿ.ಸುಧಾಕರ್

0

ಚಿತ್ರದುರ್ಗ: ಅಧಿಕಾರ ಇಲ್ಲದೆ ಭ್ರಮನಿರಸನಗೊಂಡು, ಬಿಜೆಪಿಯ ಬಾಡಿಗೆ ಗುತ್ತಿಗೆದಾರರಿಂದ ನಮ್ಮ ಸರ್ಕಾರದ ಮೇಲೆ ಆರೋಪ ಹೊರಿಸುತ್ತಿದ್ದಾರೆ ಎಂದು ಸಚಿವ ಡಿ.ಸುಧಾಕರ್ ಹೇಳಿದರು.

ಚಿತ್ರದುರ್ಗದಲ್ಲಿ ಸೋಮವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, 40% ತಿಂದು ತಿಂದು ಈಗ ಅಧಿಕಾರ ಇಲ್ಲದೆ ಒದ್ದಾಡುತ್ತಿದ್ದಾರೆ ಎಂದು ಸಿ.ಟಿ.ರವಿ ಹೇಳಿಕೆಗೆ ತಿರುಗೇಟು‌ ನೀಡಿದರು.

ಆರು ತಿಂಗಳಲ್ಲಿ ಸರ್ಕಾರ ಬಿದ್ದು ಹೋಗಲಿದೆ ಎನ್ನುವ ಬಿಜೆಪಿ ನಾಯಕ ಬಸವನಗೌಡ ಪಾಟೀಲ ಯತ್ನಾಳ್ ಹೇಳಿಕೆಗೆ ಪ್ರತಿಕ್ರಿಯಿಸಿ, ನಮ್ಮ ಸರ್ಕಾರ ಭದ್ರವಾಗಿದೆ. ಈ ಬಾರಿ ಆಪರೇಷನ್ ಆಗುವಂತಹ ಶಾಸಕರಿಲ್ಲ. ಕಳೆದ ಸರ್ಕಾರದಲ್ಲಿ ಆಪರೇಷನ್ ಆದ ಶಾಸಕರಿಗೆ ಜನ ಪಾಠ ಕಲಿಸಿದ್ದಾರೆ ಎಂದರು.